ರಾಗಿ ಲಕ್ಷ್ಮಣಯ್ಯ ಸ್ಮಾರಕ ಸಮಿತಿ ವತಿಯಿಂದ ಜು.15ರಂದು ಬೆಳಿಗ್ಗೆ 10.30 ಗಂಟೆಗೆ ರಾಗಿ ಲಕ್ಷ್ಮಣಯ್ಯ ಸ್ಮಾರಕ ಉಪನ್ಯಾಸ, ಸನ್ಮಾನ ಸಮಾರಂಭ ಮಂಡ್ಯ ತಾಲ್ಲೂಕಿನ ವಿ.ಸಿ.ಫಾರಂ ನ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ.
ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸಮಾರಂಭ ಉದ್ಘಾಟಿಸುವರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ್ ಎಸ್.ವಿ ಪ್ರಶಸ್ತಿ ಪ್ರದಾನ ಮಾಡುವರು. ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಪ್ರಭಾಕರ್ ಶೆಟ್ಟಿ ಟಿ.ಕೆ ”ಹವಾಮಾನ ಚತುರ ಸುಸ್ಥಿರ ಕೃಷಿ” ಕುರಿತು ಸ್ಮಾರಕ ಉಪನ್ಯಾಸ ನೀಡುವರು. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸುವರು.
ಕು.ರೂಪ ಎಂ.ಎನ್ ಅವರಿಗೆ ಕೆ.ಕೆ. ಅವಧಾನಿ ವಿದ್ಯಾರ್ಥಿ ಪ್ರಶಸ್ತಿ, ರಾಹುಲ್ ಕೆ.ಆರ್ ಅವರಿಗೆ ದಿ. ದೇವಮ್ಮ ಮತ್ತು ದಿ. ಎಚ್. ಹೊನ್ನಯ್ಯ ಇಂಡುವಾಳು ವಿದ್ಯಾರ್ಥಿ ಪ್ರಶಸ್ತಿ, ನಂಜೇಗೌಡ ಅವರಿಗೆ ಶ್ರೀಮತಿ ಲಕ್ಷ್ಮಮ್ಮ ಮತ್ತು ದಿ.ಕೆ.ರಾಮೇಗೌಡ ರೈತ ಪ್ರಶಸ್ತಿ (ರಾಗಿ, ಸಿ.ಎನ್.ಶಿವಕುಮಾರ ಅವರಿಗೆ ದಿ ನಾಗಮ್ಮ ಮತ್ತು ದಿ.ಕೆ.ಮಂಜೇಗೌಡ (ಭತ್ತ) ರೈತ ಪ್ರಶಸ್ತಿ ಹಾಗೂ ಅನಿಲ್ಕುಮಾರ್ ಡಿ.ಎನ್ ಅವರಿಗೆ ಶ್ರೀಮತಿ ಪುಟ್ಟಮ್ಮ ಮತ್ತು ದಿ. ಎ.ಎಸ್.ಅಣ್ಣೇಗೌಡ ರೈತ ಹಾಲು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.