ಮಂಡ್ಯ ನಗರದ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಶಾಸಕ ರವಿಕುಮಾರ್ ಅವರ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ನೇತ್ರದಾನ ನೋಂದಣಿ ಮಾಡಿದ ದಾನಿಗಳಿಗೆ ಡಿಎಚ್ಒ ಕಚೇರಿಯ ಅಧಿಕಾರಿಎಸ್.ಸಿ.ಪವನ್ಸಿಂಗ್ ಅವರು ಪ್ರಮಾಣ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಅಭಿಮಾನಿಗಳಾದ ಸುನೀಲ್, ಶೈಲೇಂದ್ರಕುಮಾರ್, ಡಿ.ಮಂಜುನಾಥ್, ನಾಗೇಶ್, ರಘು, ಮಾರುತಿ, ಶಿವು, ಯೋಗಾನಂದ್, ಆನಂದ್, ಗೋಪಿ, ಮನೋಜ್, ಸೋಮಶೇಖರ್ ಭಾಗವಹಿಸಿದ್ದರು.
ಅನ್ನಸಂತರ್ಪಣೆ
ಮಂಡ್ಯ ನಗರದ ಪ್ರೇರಣಾ ಟ್ರಸ್ಟ್ನಲ್ಲಿ ರವಿಕುಮಾರ್ರ ಹುಟ್ಟು ಹಬ್ಬದ ಅಂಗವಾಗಿ ಅವರ ಅಭಿಮಾನಿಗಳು ಮತ್ತು ಮುಖಂಡರು ಅನ್ನಸಂತರ್ಪಣೆ ಏರ್ಪಡಿಸಿ, ವಿಕಲಚೇತನ ಮಕ್ಕಳಿಗೆ ಅನ್ನದಾನ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಮಲಿಂಗಯ್ಯ, ಮುಖಂಡರಾದ ನಾಗೇಶ್, ಶ್ರೀಕಾಂತ್, ಲಕ್ಷ್ಮೀಕಾಂತ್, ಪ್ರೇರಣಾ ಟ್ರಸ್ಟ್ನ ರವಿಕುಮಾರ್ ಸೇರಿದತೆ ಇತರರು ಭಾಗವಹಿಸಿದ್ದರು.
ದಿನಸಿ ವಿತರಣೆ
ಮಂಡ್ಯನಗರದ ಬನ್ನೂರು ರಸ್ತೆ ಜೋಗುಳ ವಿಕಸನ ಕೇಂದ್ರದಲ್ಲಿ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು, ಅಲ್ಲದೇ ಮಧ್ಯಾಹ್ನದ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಮಂಡ್ಯ ಜಿಲ್ಲಾಸ್ಪತ್ರೆಯ ಮಮತೆಯ ಮಡಿಲು ವತಿಯಿಂದ ಬೆಳಗಿನ ಉಪಾಹಾರ ಮತ್ತು ಗಂಜಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಭೂನ್ಯಾಯ ಮಂಡಳಿ ನಾಮನಿರ್ದೇಶಿತ ಪಣಕನಹಳ್ಳಿ ಅರುಣ್, ಉಮೇಶ್, ಪಿ.ಎಂ.ರವಿ, ಶ್ರೀಧರ್, ಸುಂಡಹಳ್ಳಿ ಮಂಜುನಾಥ್, ಶಿವು, ಲಕ್ಷ್ಮಣ್, ಮಂಗಲ ಯೋಗೀಶ್ ಭಾಗವಹಿಸಿದ್ದರು.