ಕೇಸರಿ ಬಟ್ಟೆಯ ರಾಜಕಾರಣದ ಬಗ್ಗೆ ಮಂಡ್ಯ ಜಿಲ್ಲೆಯ ರೈತ ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಪಕ್ಷ ನಾವು ಧರಿಸುವ ಬಟ್ಟೆ, ಆಹಾರದ ಬಗ್ಗೆ ರಾಜಕಾರಣ ಮಾಡುತ್ತಿದ್ದು, ನಾವು ಹಿಂದೂ-ಮುಸ್ಲಿಮರು ಎಲ್ಲರೂ ಕನ್ನಡ ತಾಯಿಯ ಮಕ್ಕಳು.ಅವರು ಧರ್ಮದ ಹೆಸರಿನಲ್ಲಿ ಬೆಂಕಿ ಹಚ್ಚಲು ಹೊರಟಿದ್ದಾರೆ.ಶ್ರೀರಂಗಪಟ್ಟಣದಲ್ಲಿ ಕೇಸರಿ ಬಟ್ಟೆಯ ಆರ್ಭಟ ಹೆಚ್ಚಾಗಿದೆ.
ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕವನ್ನು ಕೇಸರಿ ಬಟ್ಟೆ ರಾಜಕಾರಣವು, ಈ ನಾಡನ್ನು ನಾಶ ಮಾಡಲು ಹೊರಟಿದ್ದು,ಈ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದರು.
ನಾನು ಮಂಡ್ಯದ ಅಭಿವೃದ್ಧಿಗೆ 9 ಸಾವಿರ ಕೋಟಿಯ ಬಜೆಟ್ ಮಂಡಿಸಿ,ಹಣಕಾಸಿನ ಅನುಮೋದನೆ ಮಾಡಿಸಿದ್ದೆ.ಆದರೆ
ಬಿಜೆಪಿ ಅವರು ಮಂಡ್ಯ ಜಿಲ್ಲೆಯ ಬಜೆಟ್ ಎಂದು ಕೇಕೆ ಹಾಕಿದರು. ಈಗ ಬಂದು ಮಂಡ್ಯ ಜನರ ಓಟು ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.