ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದ ಜನತೆ ಪಂಚರತ್ನ ರಥಯಾತ್ರೆಗೆ ಬಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ
ಬೆಲ್ಲದ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತ ಕೋರಿದರು.
ರಾತ್ರಿ 10.30 ರ ಸುಮಾರಿಗೆ ಕಿರುಗಾವಲು ಗ್ರಾಮದ ಮುಖ್ಯ ರಸ್ತೆಯ ವೃತ್ತಕ್ಕೆ ಆಗಮಿಸಿದ ಕುಮಾರಸ್ವಾಮಿಯನ್ನು ಸಾವಿರಾರು ಗ್ರಾಮಸ್ಥರು ಹೆಚ್ಚು ಜನರು ಸ್ವಾಗತಿಸಿದರು.
ಕುಮಾರಸ್ವಾಮಿ ಅವರಿಗೆ ಎರಡು ಕಡೆ ಜೆಸಿಬಿಯಲ್ಲಿದ್ದ ಯುವಕರು ಪುಷ್ಪಾರ್ಚನೆ ಮಾಡಿದರು.
ಮಂಡ್ಯದ ಸೊಗಡಿನ ಬೆಲ್ಲದಚ್ಚಿನ ಬೃಹತ್ ಹಾರವನ್ನು ಕ್ರೇನ್ ಮೂಲಕ ಹಾಕಿ ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮದಿಂದ ಗ್ರಾಮಕ್ಕೆ ಪಂಚರತ್ನ ಯಾತ್ರೆಯನ್ನು ಬರಮಾಡಿಕೊಂಡರು.