Thursday, September 19, 2024

ಪ್ರಾಯೋಗಿಕ ಆವೃತ್ತಿ

ನ.4ರಂದು ಸಂಕೀರ್ತನಾ ಯಾತ್ರೆ : ಅಶೋಕ್ ಜಯರಾಂ

ನ.4ರಂದು ನಡೆಯಲಿರುವ ಸಂಕೀರ್ತನಾ ಯಾತ್ರೆಗೆ ನಗರದಿಂದ ಸಾವಿರಾರು ಹನುಮ ಮಾಲಾಧಾರಿಗಳು ತೆರಳಲಿದ್ದಾರೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್‌ಜಯರಾಂ ಹೇಳಿದರು.

ಮಂಡ್ಯ ನಗರದ ಕೆಂಪೇಗೌಡ ಉದ್ಯಾನದಲ್ಲಿನ ವೀರಾಂಜನೇಯ ದೇವಾಲಯದಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಆಯೋಜಿಸಿದ್ದ ಹನುಮ ಮಾಲೆ ಸಂಕೀರ್ತನಾ ಯಾತ್ರಾ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶ್ರೀರಂಗಪಟ್ಟಣ ಮೂಡಲ ಬಾಗಿಲು ಅಂಜನೇಯ ಸ್ವಾಮಿ ದೇವಾಲಯದ ಪುನರ್ ನಿರ್ಮಾಣದ ಸಂಕಲ್ಪ ಮಾಲೆಯ ಬೃಹತ್ ಸಮಾವೇಶವು ನ.4ರಂದು ನಡೆಯಲಿದೆ, ಇಂದು ಮಂಡ್ಯ ನಗರದಿಂದ ಸಂಕೀರ್ತನಾ ಯಾತ್ರಾರಥವು ವಿವಿಧ ಸ್ಥಳೀಯ ರಾಮಮಂದಿರಗಳು, ಆಂಜನೇಯ ಸ್ವಾಮಿ ದೇವಾಲಯಗಳ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಸದಾನಂದ ಮಾತನಾಡಿ, ಈ ರಥಯಾತ್ರೆಯು ಇಂದು ನಗರದಲ್ಲಿ ಸಂಚರಿಸಿ, ಜನಜಾಗೃತಿ ಮೂಡಿಸಿ, ನಾಳೆ ಮಂಡ್ಯ ಗ್ರಾಮಾಂತರಕ್ಕೆ ತೆರಳಲಿದೆ. ಗ್ರಾಮಗಳಲ್ಲಿನ ವಿವಿಧ ದೇವಾಲಯಗಳಲ್ಲಿ ಸಂಚರಿಸಿ ನ.14ರಂದು ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಸಮಾಪ್ತಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಅರುಣ್‌ಕುಮಾರ್, ಚಂದ್ರ, ಶಿವಲಿಂಗ, ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ್‌ವಿಶ್ವಕರ್ಮ, ನಗರ ಮೋರ್ಚಾ ಅಧ್ಯಕ್ಷ ವಿವೇಕ್, ಪ.ನಾ.ಸುರೇಶ್, ಹರ್ಷ, ನಿತ್ಯಾನಂದ, ಹನುಮಂತು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!