ಕಳೆದ ಆಗಸ್ಟ್ 31 ರಿಂದ ಸೆಪ್ಟೆಂಬರ್ 3 ರವರೆಗೆ ಬೆಳಗಾವಿಯಲ್ಲಿ ನಡೆದ 3ನೇ ಕರ್ನಾಟಕ ರಾಜ್ಯ ಶ್ರೇಯಾಂಕ ಪಂದ್ಯಾವಳಿಯಲ್ಲಿ ಭಾಗವಹಿಸಿ 2ನೇ ಸ್ಥಾನಗಳಿಸಿರುವ ಜನತಾ ಶಿಕ್ಷಣ ಟ್ರಸ್ಟ್ ಟೇಬಲ್ ಟೆನ್ನಿಸ್ ಶಾಲೆಯ ವಿದ್ಯಾರ್ಥಿನಿ ಎಸ್.ರಚಿತಾ ಅವರನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅಭಿನಂದಿಸಿದರು.
ನಂತರ ಮಾತನಾಡಿದ ಅವರು, ಪಿಇಟಿ ಕ್ರೀಡಾಂಗಣದಲ್ಲಿ ತರಬೇತಿ ಪಡೆಯುತ್ತಿರುವ ರಚಿತಾರವರು ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ರ್ಯಾಂಕಿಂಗ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಇನ್ನು ಉತ್ತಮವಾದ ಸಾಧನೆ ಮಾಡುವ ಮೂಲಕ ಇವರ ಕ್ರೀಡಾ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಯುವಕ ಯುವತಿಯರಿಗೆ ತರಬೇತುದಾರರು ಶ್ರಮಪಟ್ಟು ಇನ್ನೂ ಹೆಚ್ಚಿನ ಮಟ್ಟದಲ್ಲಿ ತರಬೇತಿ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆ ಯಾಗುವ ಮೂಲಕ ತರಬೇತಿದಾರರನ್ನು ತಯಾರು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ತರಬೇತುದಾರ ಎಂ.ಎ. ಮಂಜುನಾಥ್, ಟೇಬಲ್ ಟೆನ್ನಿಸ್ ಶಾಲೆಯ ಪಾಲುದಾರರಾದ ಉಮೇಶ್ ಎಂ.ಎಸ್.ಮತ್ತು ಪ್ರತಾಪ್ ಬಿ.ಎಸ್. ಪೋಷಕರಾದ ಹೇಮಾ ಬಿ.ಎಂ ಹಾಗೂ ವೈ.ಸಿದ್ದೇಶ್ ಅವರು ಅಭಿನಂದಿಸಿದರು.