ಡಾ.ರಾಜಕುಮಾರ್ ಅವರ ಕುಟುಂಬ ನಡೆಸಿಕೊಂಡು ಬಂದಿರುವ ಹೆಮ್ಮೆಯ ಸಂಸ್ಥೆ ಮೈಸೂರಿನ ಶಕ್ತಿಧಾಮಕ್ಕೆ ಡಾ.ಶಿವರಾಜಕುಮಾರ್ ದಂಪತಿಗಳ ಪ್ರೀತಿಯ ಆಹ್ವಾನದ ಮೇರೆಗೆ ಮಂಡ್ಯ ಸಂಸದೆ, ಚಿತ್ರ ನಟಿ ಸುಮಲತಾ ಅಂಬರೀಶ್ ಅವರು ನಟ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರೊಂದಿಗೆ ಭೇಟಿ ಕೊಟ್ಟು ಮಕ್ಕಳ ಜೊತೆ ಬೆರೆತರು.
ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಜೊತೆ ಕಲೆತು ಅವರ ಜೊತೆ ಕಾಲ ಕಳೆದರು, ಇಂತಹ ಸಂದರ್ಭಕ್ಕೆ ಅವಕಾಶ ಮಾಡಿಕೊಟ್ಟ ಡಾ.ರಾಜ್ ಕುಟುಂಬಕ್ಕೆ ಧನ್ಯವಾದಗಳು. ಅಲ್ಲಿನ ಮಕ್ಕಳ ಜೊತೆ ಅವರ ಶಿಕ್ಷಣ, ಜೀವನದ ಗುರಿಗಳ ಬಗ್ಗೆ ಮಾತನಾಡಿ ಅವರಿಗೆ ಸ್ಫೂರ್ತಿ ತುಂಬುವ ಪ್ರಯತ್ನ ಮಾಡಿದೆ. ನೂರಾರು ಮಕ್ಕಳ, ಮಹಿಳೆಯರ ಭವಿಷ್ಯ ರೂಪಿಸುತ್ತಿರುವ ಈ ಮಾದರಿ ಸಂಸ್ಥೆ ನಮ್ಮೆಲ್ಲರ ಹೆಮ್ಮೆ ಎಂದು ಪುನೀತ್ ರಾಜ್ ಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಸುಮಲತಾ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಸಂಸ್ಥೆಗೆ ನನ್ನ ಕರೆಸಿಕೊಂಡ ಡಾ.ಶಿವರಾಜಕುಮಾರ್ ಅವರಿಗೆ ಮತ್ತೊಮ್ಮೆ ಧನ್ಯವಾದಗಳು, ಶಕ್ತಿಧಾಮ ಇನ್ನಷ್ಟು ಎತ್ತರಕ್ಕೆ ಬೆಳೆದು ಇನ್ನು ಸಾವಿರಾರು ಮಹಿಳೆಯರಿಗೆ, ಮಕ್ಕಳಿಗೆ ನೆರವಾಗಲಿ ಎಂದು ಅವರು ಆಶಿಸಿದ್ದಾರೆ.