ಮಂಡ್ಯ ನಗರಸಭೆ ಮಾಜಿ ಸದಸ್ಯ ಹಾಗೂ ಜನತಾ ಶಿಕ್ಷಣ ಟ್ರಸ್ಟ್ ನ ಟ್ರಸ್ಟಿ ಕೆ.ಶಂಕರೇಗೌಡ(65) ಅವರು ಅನಾರೋಗ್ಯದಿಂದ ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮಂಡ್ಯನಗರ ಗುರುರಾಜ ಕಾಂಟಿನೆಂಟಲ್ ಹೋಟೇಲ್ ಮತ್ತು ಕಲ್ಲಹಳ್ಳಿ ಗುರುಶಂಕರಾನಂದ ರೈಸ್ಮಿಲ್ ಮಾಲೀಕರೂ ಆಗಿದ್ದ ಶಂಕರೇಗೌಡ ಅವರು, ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಶನಿವಾರ ಕೊನೆಯುಸಿರೆಳೆದರು.
ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಮೃತರ ಅಂತ್ಯಕ್ರಿಯೆಯು ಮಂಡ್ಯನಗರದ ಕಲ್ಲಹಳ್ಳಿಯಲ್ಲಿ ಡಿ.24ರಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.