Friday, September 20, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ಕಾಡಾನೆ ತುಳಿತಕ್ಕೆ ರೈತ ಮಹಿಳೆ ಸಾವು

ಶ್ರೀರಂಗಪಟ್ಟಣ ತಾಲ್ಲೂಕಿನ ಲಾಳನಕೆರೆ-ಪೀಹಳ್ಳಿ ಗ್ರಾಮದ ಬಳಿ ರೈತ ಮಹಿಳೆಯೊಬ್ಬರು ಜಮೀನಿಗೆ ತೆರಳಿದ್ದ ವೇಳೆ ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಲಾಳನಕೆರೆ ಗ್ರಾಮದ ಸಾಕಮ್ಮ ಲೇ.ಸಿದ್ದಪ್ಪ(50)
ಮೃತ ರೈತ ಮಹಿಳೆ. ಭಾನುವಾರ ಮುಂಜಾನೆ ರೈತ ಮಹಿಳೆ ಸಾಕಮ್ಮ ಕೂಲಿ ಕೆಲಸಕ್ಕಾಗಿ ಜಮೀನಿಗೆ ತೆರಳಿದ್ದರು.ಈ ಸಂದರ್ಭದಲ್ಲಿ ಒಂಟಿ ಸಲಗವೊಂದು ಸಾಕಮ್ಮ ಅವರ ತಲೆ,ಎದೆಯ ಭಾಗಕ್ಕೆ ತುಳಿದಿದೆ.ಆನೆ ದಾಳಿಗೆ ಸ್ಥಳದಲ್ಲಿಯೇ ಸಾಕಮ್ಮ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳ ಬಂದು ಪರಿಶೀಲನೆ ನಡೆಸಿದ್ದಾರೆ.ಆನೆ ದಾಳಿಯಿಂದ ಸಾಕಮ್ಮ ಮೃತರಾಗಿದ್ದು, ಕೂಡಲೇ ಆಕೆಯ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!