2023 ರ ವಿಧಾನಸಭಾ ಚುನಾವಣೆಯಲ್ಲಿ ನಾನು ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ನನಗೆ ಸಂಪೂರ್ಣ ಸಹಕಾರ ನೀಡುವ ಮೂಲಕ ಬೆಂಬಲಿಸಬೇಕೆಂದು ಜನರಿಗೆ ಸಮಾಜ ಸೇವಕ ಮಲ್ಲಿಕಾರ್ಜುನ್ (ಫೈಟರ್ ರವಿ) ಮನವಿ ಮಾಡಿದರು.
ನಾಗಮಂಗಲ ತಾಲೂಕು ಕಸಬಾ ಹೋಬಳಿಯ ಚಿಕ್ಕೀರಿನ ಕೊಪ್ಪಲು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಮಾಜ ಸೇವಕರಾದ ಮಲ್ಲಿಕಾರ್ಜುನ (ಫೈಟರ್ ರವಿ) ಅವರು ಊರಿನ ಯಜಮಾನರಿಂದ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಅವರು, ಆರೋಗ್ಯ ತಪಾಸಣೆ ಹಾಗೂ ಶುದ್ಧ ನೀರನ್ನು ಕೊಡಬೇಕೆಂಬುದು ನನ್ನ ಉದ್ದೇಶ. ಅದೇ ರೀತಿಯಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಇದೇ ರೀತಿಯಲ್ಲಿ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದು ಮನವಿ ಮಾಡಿದರು.
ನಾನು ನಿಮ್ಮೂರಿನ ಕೆಲಸಗಳನ್ನು ಮಾಡಿಕೊಡಲು ಸದಾ ಸಿದ್ಧನಿದ್ದೇನೆ. ಏನೇ ಅಡೆತಡೆಗಳು ಬಂದರೂ ಅದನ್ನು ನಾನು ಲೆಕ್ಕಿಸುವುದಿಲ್ಲ. ಜನರ ಕಷ್ಟ- ಸುಖಗಳಲ್ಲಿ ಎಂದೆಂದಿಗೂ ಜೊತೆಗಿರುವೆ ಎಂದರು.
ಈ ಸಂದರ್ಭದಲ್ಲಿ ಅರ್ಜುನ್, ಪವನ್, ಅಭಿಷೇಕ್, ಡೈರಿ ನಾಗರಾಜ್, ಮುತ್ತೂಟ್ ರವಿ, ಪ್ರಮೋದ್ ಯಜಮಾನರು, ರಮೇಶ್ ಯಜಮಾನರು, ಕುಮಾರ್ ಸೇರಿದಂತೆ ಗ್ರಾಮಸ್ಥರುಗಳು ಪಾಲ್ಗೊಂಡಿದ್ದರು.