ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ತಮ್ಮ ಹಾಗೂ ತಮ್ಮ ಕಾರ್ಯಕರ್ತರ ಮೇಲೆಗೆ ಹಲ್ಲೆಗೆ ಯತ್ನಿಸಿದ್ದಾರೆಂದು ಪಕ್ಷೇತರ ಅಭ್ಯರ್ಥಿ ತಗ್ಗಹಳ್ಳಿ ವೆಂಕಟೇಶ್ ಆರೋಪಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ (ಮೇ 3) ರಂದು ರಾತ್ರಿ 8 ಗಂಟೆಯ ಸಮಯದಲ್ಲಿ ಮೇಳಾಪುರ ಗ್ರಾಮದಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದರು ಎಂದು ದೂರಿದರು.
ಪ್ರತಿಯೊಬ್ಬರಿಗೆ ಯಾವ ಸ್ಥಳದಲ್ಲಿ ಬೇಕಾದರೂ ಶಾಂತಿಯುತವಾಗಿ ಪ್ರಚಾರ ನಡೆಸುವ ಹಕ್ಕು ಇದೆ, ಆದರೆ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಪ್ರಚಾರ ಅಡ್ಡಿಪಡಿಸಲು ಮುಂದಾಗಿದ್ದು ಖಂಡನೀಯ. ತಮ್ಮ ಕಾರ್ಯಕರ್ತರಿಗೆ ಇಂತಹ ಪ್ರವೃತ್ತಿ ಬಿಡುವಂತೆ ರವೀಂದ್ರ ಶ್ರೀಕಂಠಯ್ಯ ಬುದ್ದಿವಾದ ಹೇಳಬೇಕು. ಇಲ್ಲವಾದಲ್ಲಿ ಮುಂದಾಗುವ ತಪ್ಪುಗಳಿಗೆ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದರು.
ಶ್ರೀರಂಗಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಹಣ ಹಾಗೂ ಹೆಂಡದ ಹೊಣೆ ಹರಿಸುತ್ತಿತ್ತು, ಇದಕ್ಕೆ ಚುನಾವಣಾಧಿಕಾರಿಗಳು ಕಡಿವಾಣ ಹಾಕಬೇಕೆಂದರು.
ಗೋಷ್ಠಿಯಲ್ಲಿ ಮುಖಂಡರಾದ ಕೆಂಪೇಗೌಡ, ಜಗದೀಶ್, ಲಂಕೇಶ್, ಪುಟ್ಟೇಗೌಡ, ದರ್ಶನ್ ಹಾಗೂ ಮುರುಳಿ ಉಪಸ್ಥಿತರಿದ್ದರು.