ದಿ ವಿಜ್ಲಾರ್ಡ್ ಗುರು ಟ್ರಸ್ಟ್ ಹಾಗೂ ಮಂಡ್ಯ ರಾಯಲ್ ಚೆಸ್ ಅಕಾಡೆಮಿ ಆಶ್ರಯದಲ್ಲಿ ಮೇ 26ರಂದು ಮಂಡ್ಯದ ಗಾಂಧಿ ಭವನದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುರು ಟ್ರಸ್ಟ್ ಸಂಸ್ಥಾಪಕ ಚೇತನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಮೈಸೂರು ವಿಭಾಗೀಯ ಅಬಕಾರಿ ಇಲಾಖೆಯ ಡಿವೈಎಸ್ಪಿ ಕೆ ಮೋಹನ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಹಾರಾಣಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಿ.ಎಸ್.ಕುಮಾರ್, ಸಮೂಹ ಸಂಪನ್ಮೂಲ ಶಿಕ್ಷಣಾಧಿಕಾರಿ ಚಂದ್ರಕಲಾ, ಪತ್ರಕರ್ತ ಚಿಕ್ಕಮಂಡ್ಯ ನವೀನ್, ಕೆ ಆರ್ ವಿವಿ ರಾಜ್ಯಾಧ್ಯಕ್ಷರಾದ ಎಚ್ ಎಲ್ ಯಮುನಾ ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಆರ್ಟಿಸ್ಟಿಕ್, ಜಿಮ್ನಾಸ್ಟಿಕ್, ಸೌತ್ ಜೋನ್ ಬ್ರಾನ್ಸ್ ಪದಕ ವಿಜೇತೆ ಸಿಂಚನ, ಕಿಕ್ ಬಾಕ್ಸಿಂಗ್ ಗೋಲ್ಡ್ ಮೆಡಲಿಸ್ಟ್ ಪುಷ್ಪಲತಾ, ರಾಷ್ಟ್ರೀಯ ಚೆಸ್ ಪಂದ್ಯಕ್ಕೆ ಆಯ್ಕೆಯಾಗಿರುವ ಜ್ಞಾನವಿ ಸೇರಿದಂತೆ ಇತರರನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಚೆಸ್ ತರಬೇತುದಾರರಾದ ಸುಹೇಬ್ ಖಾನ್, ಟ್ರಸ್ಟಿನ ಖಜಾಂಚಿ ರಾಕೇಶ್ ಗೌಡ ಉಪಸ್ಥಿತರಿದ್ದರು.