ಸದಾ ದೇಶಭಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ಬಿಜೆಪಿ ಕಾರ್ಯಕರ್ತರು, ಭಾರತ ಕಡು ವಿರೋಧಿ ರಾಷ್ಟ್ರವೆಂದೇ ಬಿಂಬಿತವಾಗಿರುವ ”ಪಾಕಿಸ್ತಾನಕ್ಕೆ ಜಿಂದಾಬಾದ್” ಕೂಗಿದ ಆಘಾತಕಾರಿ ಘಟನೆ ಮಂಡ್ಯ ನಗರದಲ್ಲಿ ಶನಿವಾರ ನಡೆಯಿತು.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭಾರತದ ಪ್ರಧಾನಿ ನರೇಂದ್ರಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ಖಂಡಿಸಲು ಮಂಡ್ಯನಗರದ ಸಂಜಯ ವೃತ್ತದಲ್ಲಿ ಸೇರಿದ ಬಿಜೆಪಿಯ ನೂರಾರು ಕಾರ್ಯಕರ್ತರು, ಘೋಷಣೆ ಕೂಗುವ ಭರದಲ್ಲಿ ”ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗಿ ಅಪ್ಪಟ ದೇಶಭಕ್ತರ ಕೆಂಗಣ್ಣಿಗೆ ಗುರಿಯಾದರು.
ಮೊದಲು ”ಪಾಕಿಸ್ತಾನ್ ಮುರ್ದಾಬಾದ್” ಎಂದು ಕೂಗಿದ ಬಿಜೆಪಿ ಕಾರ್ಯಕರ್ತರು ನಂತರ ” ಪಾಕಿಸ್ತಾನ್ ಜಿಂದಾಬಾದ್” ಎಂದು ಮೊಳಗಿಸಿದ್ದು, ಸುತ್ತಮುತ್ತಲ ಸಾರ್ವಜನಿಕರು ಕ್ಷಣಕಾಲ ದಂಗಾಗುವಂತೆ ಮಾಡಿತು. ದೇಶಭಕ್ತಿಯ ಪಾಠ ಹೇಳುವ ಬಿಜೆಪಿ, ಸಂಘ ಪರಿಹಾರದ ಕಾರ್ಯಕರ್ತರೇ ವಿರೋಧಿ ರಾಷ್ಟ್ರದ ಬಗ್ಗೆ ಜಿಂದಾಬಾದ್ ಮೊಳಗಿಸಿದ್ದು, ನೈಜ ರಾಷ್ಟ್ರಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.