Monday, September 16, 2024

ಪ್ರಾಯೋಗಿಕ ಆವೃತ್ತಿ

ಮಧು ಜಿ.ಮಾದೇಗೌಡ ಬೆಂಬಲಿಸಲು ಸಮಾನ ಮನಸ್ಕರ ಸಭೆ ತೀರ್ಮಾನ

ಮಂಡ್ಯದ ಗಾಂಧಿ ಭವನದಲ್ಲಿ ಇಂದು ನಡೆದ ಸಮಾನ ಮನಸ್ಕರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ ಮಾದೇಗೌಡರನ್ನು ಬೆಂಬಲಿಸಲು ತೀರ್ಮಾನಿಸಲಾಯಿತು.

ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ. ಮಾದೇಗೌಡರವರನ್ನು ಬೆಂಬಲಿಸಲು ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.

ಜಿ.ಮಾದೇಗೌಡರು ನಡೆಸಿದ ಜನಪರ ಹೋರಾಟಗಳು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ಹಿನ್ನೆಲೆಯಲ್ಲಿ ಅವರ ಪುತ್ರ ಮಧು ಮಾದೇಗೌಡರನ್ನು ಬೆಂಬಲಿಸ ಸಮಾನ ಮನಸ್ಕರಾದ ನಾವೆಲ್ಲ ಮುಂದಾಗಿದ್ದೇವೆ.

ಮಾದೇಗೌಡರು ತಮ್ಮ ಜೀವಿತದ ಕೊನೆಯವರೆಗೂ ಜನಪರ ಹೋರಾಟಗಳಲ್ಲಿ ಸಕ್ರಿಯರಾಗಿದ್ದರು ಮೈಷುಗರ್ ಕಾರ್ಖಾನೆಯ ಹೋರಾಟ, ಕಾವೇರಿ ನೀರಿನ ಹೋರಾಟ ಸೇರಿದಂತೆ ಜನಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.

ಹಾಗೆಯೇ ಭಾರತೀನಗರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಮಂಡ್ಯ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಯ ಜನರಿಗೆ ಉತ್ತಮವಾದ ಶಿಕ್ಷಣವನ್ನು ದೊರೆಯುವಂತೆ ಮಾಡಿದ್ದಾರೆ.ಮಧು ಅವರು ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬೆಂಬಲಿಸಬೇಕೆಂದು ಸಮಾನ ಮನಸ್ಕರ ಸಭೆ ತೀರ್ಮಾನಿಸಿದೆ.

ಲಿಂಗಣ್ಣ ಬಂಧುಕಾರ್. ಜಿ. ಟಿ. ವೀರಪ್ಪ. ಎಂ. ಬಿ. ಬೋರೇಗೌಡ. ಹುಲ್ಕೆರೆ ಕನ್ನಡಸೇನೆ ಮಂಜುನಾಥ್, ಮಂಗಲ ಯೋಗೇಶ್, ಗೋಪಾಲಪುರ ಕೆಂಪೇಗೌಡ ಚಂದ್ರಹಾಸ, ತೂಬಿನಕೆರೆ ಲಿಂಗರಾಜು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!