ಅ.21 ರ ಶುಕ್ರವಾರ ಬೆಳಿಗ್ಗೆ 7.30 ಗಂಟೆಗೆ ಜಿಲ್ಲಾ ಕವಾಯತು ಮೈದಾನದಲ್ಲಿ (ಡಿ.ಎ.ಆರ್) ಪೊಲೀಸ್ ಹುತಾತ್ಮರ ದಿನಾಚರಣೆ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಅಶ್ವತಿ.ಎಸ್ ಭಾಗವಹಿಸಲಿದ್ದು, ಎಸ್ಪಿ ಎನ್.ಯತೀಶ್ ಮತ್ತು ಎಎಸ್ಪಿ ಎಂ.ವೇಣುಗೋಪಾಲ್ ಉಪಸ್ಥಿತರಿರುವರು. ಬೆಳಿಗ್ಗೆ 7-30 ಗಂಟೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಮಾವೇಶ ನಡೆಯಲಿದೆ.
8.03ಕ್ಕೆ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಮುಖ್ಯ ಅತಿಥಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಇತರೆ ಗಣ್ಯರಿಂದ ಪುಷ್ಪಗುಚ್ಚ ಸಮರ್ಪಣೆ ನಡೆಯಲಿದ್ದು, 8.15 ಗಂಟೆಗೆ ಪೊಲೀಸ್ ಹುತಾತ್ಮರ ಸ್ಮರಣಾರ್ಥ ಮೂರು ಸುತ್ತು ಹುಸಿಗುಂಡು ಹಾರಿಸಲಾಗುವುದು. 8.25 ಗಂಟೆಗೆ ಪೊಲೀಸ್ ಹುತಾತ್ಮರ ಹೆಸರುಗಳ ಸ್ಮರಣೆ, ಮುಖ್ಯ ಅತಿಥಿಗಳಿಂದ ನುಡಿ ನಮನ ನಡೆಯಲಿದೆ.