ನಾಡಪ್ರಭು ಕೆಂಪೇಗೌಡರ ಜಯಂತಿಯು ಮತ್ತಷ್ಠು ಜನಮುಖಿಯಾಗಬೇಕು ಎಂಬ ಆಶಯದಿಂದ ಕೆಂಪೇಗೌಡರ ಸಾಧನೆ ಹಾಗು ವ್ಯಕ್ತಿಚಿತ್ರ ಉಳ್ಳ ಆಕರ್ಷಕ ಸ್ಥಬ್ದಚಿತ್ರ ಮದ್ದೂರು ತಾಲ್ಲೂಕಿನಾದ್ಯಾಂತ ಎಲ್ಲಾ ಗ್ರಾಮ ಪಂಚಾಯಿತಿಗಳ ಕೇಂದ್ರ ಸ್ಥಾನದ ಹಳ್ಳಿಗಳ ಮೂಲಕ ಸಂಚರಿಸಲಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾದ್ಯಕ್ಷ ವಿ.ಸಿ.ಉಮಾಶಂಕರ್ ತಿಳಿಸಿದರು.
ಮದ್ದೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಪೂರ್ವ ಸಿದ್ದತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಂಪೇಗೌಡರ ಸಾಧನೆ ಮತ್ತು ದೂರದೃಷ್ಠಿ ಕುರಿತು ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಸಾರ್ವಜನಿಕರನ್ನು ಜಯಂತಿಗೆ ಆಹ್ವಾನಿಸುವುದು ಈ ಸ್ಥಬ್ದ ಚಿತ್ರ ಮೆರವಣಿಗೆ ಆಶಯವಾಗಿದೆ ಎಂದರು.
ಈ ಸ್ಥಬ್ದಚಿತ್ರ ಮೆರವಣಿಗೆ, ಗ್ರಾ ಪಂ ಹಾಗೂ ಸಹಕಾರಿ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿ, ಮೆರವಣಿಗೆ ಯಶಸ್ಸಿಗಾಗಿ ಪಂಚಾಯುತ್ ರಾಜ್ ತಜ್ಞರು, ಸಾಮಾಜಿಕ ಕಾರ್ಯಕರ್ತರು ಆದ ಕೆ ರವಿಕುಮಾರ್ ಜವಾಬ್ದಾರಿ ವಹಿಸಲಿದ್ದಾರೆ ಎಂದು ನೂತನ ಅಧ್ಯಕ್ಷ ಶಿವಲಿಂಗೇಗೌಡ ತಿಳಿಸಿದರು.
ವಿ ಬಿ ಶಂಕರೇಗೌಡ ಮಾತನಾಡಿ, ಕೆಂಪೇಗೌಡ ಜಯಂತಿಯ ಯಶಸ್ಸಿಗಾಗಿ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ನ ಲಿ ಕೃಷ್ಣ, ಎಸ್ ದಯಾನಂದ. ಹಾಗಲಹಳ್ಳಿ ಬಸವರಾಜು. ಸೊ ಸಿ ಪ್ರಕಾಶ್, ಪ್ರಭುಲಿಂಗ, ವಿ ಎಚ್ ಶಿವಲಿಂಗಯ್ಯ, ಸಾಗರ್, ಸಿ ಕಾ ಶ್ರೀನಿವಾಸ್, ಕೆ ಜಿ ಉಮೇಶ್. ಪಟೇಲ್ ಹರೀಶ್, ಕರಡಕೆರೆ ವಸಂತ, ಜನಾರ್ಧನ್, ಎಂ ವೀರಪ್ಪ, ಮಮತಾ ಶಂಕರೇಗೌಡ, ಚನ್ನಸಂದ್ರ ಲಕ್ಷ್ಮಣ್, ಬೆಸಗರಹಳ್ಳಿ ಪ್ರಸನ್ನ ಅಜ್ಜಹಳ್ಳಿ ಬಸವರಾಜು, ಗುಡಿದೊಡ್ಡಿ ಶಿವಲಿಂಗಯ್ಯ. ಸಂಘಟನೆಯ ಪದಾಧಿಕಾರಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಜರಿದ್ದರು.