Saturday, September 21, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೈತ್ರಿ ಅಭ್ಯರ್ಥಿ ಉಮೇಶ್ ಅವಿರೋಧ ಆಯ್ಕೆ

ಮದ್ದೂರು ತಾಲೂಕಿನ ಆಲೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ – ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷ ಶಿವಮಾದು ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಿಗಧಿಯಾಗಿದ್ದ ಚುನಾವಣೆ ವೇಳೆ ಉಮೇಶ್ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಧರಣೀಶ್ ಕುಮಾರ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ್ ಅವರನ್ನು ಸಂಘದ ಉಪಾಧ್ಯಕ್ಷ ಶಂಕರ್ ಸೇರಿದಂತೆ ನಿರ್ದೇಶಕರು ಹಾಗೂ ಅಲೂರು ಗ್ರಾಮಸ್ಥರು ಮತ್ತು ಮುಖಂಡರು ಅಭಿನಂದಿಸಿ ಗೌರಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಉಮೇಶ್ ಸಹಕಾರ ಸಂಘದ ಅಭಿವೃದ್ಧಿಗೆ ತಮ್ಮಗಳ ಸಹಕಾರ ಅಗತ್ಯಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಹಕಾರ ಸಂಘದ ವ್ಯಾಪ್ತಿಯ ರೈತರಿಗೆ ಹಲವು ಯೋಜನೆಗಳನ್ನು ಸಕಾಲದಲ್ಲಿ ತಲುಪಿಸಲು ಕ್ರಮವಹಿಸುವುದಾಗಿ ಹೇಳಿದರು.

ಈ ವೇಳೆ ಉಪಾಧ್ಯಕ್ಷ ಶಂಕರ್, ನಿರ್ದೇಶಕರಾದ ಎಲ್ ಕೃಷ್ಣ, ಬಿರೇಶ್, ಅರವಿಂದ್, ಮಾಜಿ ಗ್ರಾ ಪಂ ಅಧ್ಯಕ್ಷರಾದ ಉದಯ್ ಶಂಕರ್, ನಟರಾಜು, ಮಾಜಿ ಸದಸ್ಯ ವಿವೇಕ್, ಮುಖಂಡರಾದ ನವನೀತ್ ,ಸುನಿಲ್ ಕುಮಾರ್, ನಂದೀಶ್, ದೊಡ್ಡಿ ಶೇಖರ್, ಪ್ರಶಾಂತ್, ದೊಳ್ಳಪ್ಪ, ಎ.ಎಸ್.ಕೃಷ್ಣ , ರಾಮಣ್ಣ , ಆಕಾಶ್, ಸೇರಿದಂತೆ ಕಾರ್ಯದರ್ಶಿ ಟಿ ಎಲ್ ಕುಮಾರ್, ಸಿಬ್ಬಂದಿಗಳಾದ ಲಿಂಗೇಗೌಡ, ಮತ್ತು ಶಾಂತರಾಜು, ಮತ್ತು ಗ್ರಾಮಸ್ಥರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!