ಮಂಡ್ಯಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಅದ್ದೂರಿ ಸ್ವಾಗತ ಕೋರಿದರು.
ಅದರಲ್ಲಿ ಪ್ರಮುಖವಾಗಿ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ನಾನಾ ಬಗೆಯ ಹಾರಗಳನ್ನು ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಹಾಕುವ ಮೂಲಕ ಅಭಿಮಾನ ಮೆರೆದರು.
ಮಂಡ್ಯದಲ್ಲಿ ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ಮಾಡಿಸುವ ಮೂಲಕ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಎಲ್ಲಾ ಜೆಡಿಎಸ್ ಮುಖಂಡರು ಕಾರ್ಯಕರ್ತರು ಮೇಲೆ ಪುಷ್ಪಾರ್ಚನೆ ಮಾಡಿಸಿದರು. ಆ ಮೂಲಕ ಬಿ.ಆರ್.ರಾಮಚಂದ್ರು ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ,ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಂತೋಷಕ್ಕೆ ಕಾರಣರಾದರು.
ಮಂಡ್ಯ ವಿಧಾನಸಭಾ ಕ್ಷೇತ್ರದ ಟಿಕೆಟ್ ಶಾಸಕ ಎಂ.ಶ್ರೀನಿವಾಸ್ ಅವರಿಗೆ ಘೋಷಣೆ ಆಗಿದ್ದರೂ ಸಹ, ಆಕಾಂಕ್ಷಿಯಾಗಿದ್ದ ಮನ್ಮುಲ್ ಅಧ್ಯಕ್ಷ ಬಿ. ಆರ್. ರಾಮಚಂದ್ರು ಅವರು ಇಂದು ತಮ್ಮ ಸಾವಿರಾರು ಅಭಿಮಾನಿಗಳ ಜೊತೆ ಪಂಚರತ್ನ ರಥಯಾತ್ರೆಯಲ್ಲಿ ಶಾಸಕ ಎಂ.ಶ್ರೀನಿವಾಸ್ ಪಕ್ಕದಲ್ಲಿ ನಿಂತು ಕುಮಾರಸ್ವಾಮಿ ಜೊತೆ ಸಾಗಿದರು.
ಪಂಚರತ್ನ ಯಾತ್ರೆ ಸಾಗುವ ಹದಿಮೂರು ಕಡೆ ಕಬ್ಬಿನ ಹಾರ, ರಾಗಿ ಹಾರ, ಹಸಿರು ದ್ರಾಕ್ಷಿ, ಕೊಬ್ಬರಿ ಬೆಲ್ಲ, ಮೆಕ್ಕೆಜೋಳ, ಮೋಸಂಬಿ, ಸೇಬು, ಸೇವಂತಿಗೆ, ಸೀಬೆ ಹಣ್ಣು, ಗುಲಾಬಿ ಸೇರಿದಂತೆ ಹದಿಮೂರು ಬೃಹತ್ ಹಾರಗಳನ್ನು ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಗೆ ಹಾಕಲು ವ್ಯವಸ್ಥೆ ಮಾಡಿದ್ದೇವೆಂದು ರಾಮಚಂದ್ರು ಅವರ ಅಭಿಮಾನಿಗಳು ತಿಳಿಸಿದರು.
ಗೆಜ್ಜಲಗೆರೆ ಬಳಿ ತುಳಸಿ ಹಾಗೂ ಸುಗಂಧರಾಜ ಹೂವಿನ ಹಾರ ಹಾಕಿದರೆ, ಬೂದನೂರು ಬಳಿ ಮೋಸಂಬಿ ಹಾರ,ಫ್ಯಾಕ್ಟರಿ ಸರ್ಕಲ್ ನಲ್ಲಿ ಕೊಬ್ಬರಿ ಹಾಗೂ ಬೆಲ್ಲದ ಹಾರ ಹಾಕಿ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಜೈಕಾರ ಹಾಕಿದರು.
ಪಂಚರತ್ನ ರಥಯಾತ್ರೆ ಸಾಗುವ ಕೊಮ್ಮೇರಹಳ್ಳಿ, ಹುಲಿವಾನ,ಕೆರಗೋಡು, ಬಿಳಿದೇಗಲು,ದೊಡ್ಡ ಗರುಡನಹಳ್ಳಿ, ಬಸರಾಳು ಸೇರಿದಂತೆ ಹದಿಮೂರು ಕಡೆ ವಿವಿಧ ಹಾರಗಳನ್ನು ಹಾಕಿ ಅಭಿನಂದಿಸುತ್ತೇವೆ ಮಂಡ್ಯ ಹಾಗೂ ಕೊಮ್ಮೇರಹಳ್ಳಿಯಲ್ಲಿ ಹೆಲಿಕಾಪ್ಟರ್ ಮೂಲಕ ಕುಮಾರಣ್ಣ ಹಾಗೂ ನಿಖಿಲಣ್ಣ ಅವರಿಗೆ ಪುಷ್ಪಾರ್ಚನೆ ಮಾಡಿಸುವುದಾಗಿ ರಾಮಚಂದ್ರು ಅಭಿಮಾನಿಗಳು ತಿಳಿಸಿದರು.