ಜಗತ್ತಿನ ಕಲಾ ವೈಭವದ ಹಾಗೂ ಕಲಾ ಸಂಸ್ಕೃತಿಯ ಇತಿಹಾಸ, ಪರಂಪರೆಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಸುರೇಶ್ ಗೌಡ ಅಭಿಮತ ವ್ಯಕ್ತಪಡಿಸಿದರು
ನಾಗಮಂಗಲ ತಾಲ್ಲೂಕು ಎಸ್ಎಸ್ಕೆ ವಿಶ್ವಕರ್ಮ ಸೇವಾ ಸಂಘವು ಆಯೋಜನೆ ಮಾಡಿದ್ದ ವಿಶ್ವಕರ್ಮ ಜಯಂತಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಎಂದರೆ ಕೇವಲ ಚಿನ್ನ, ಬೆಳ್ಳಿ ಕೆಲಸಗಾರರೆಂದು ಅಂದುಕೊಳ್ಳುವಂತಿಲ್ಲ, ರೈತರಿಗೆ ಕೃಷಿ ಸಲಕರಣೆಗಳನ್ನು ಸಿದ್ಧಪಡಿಸಿಕೊಡುವಲ್ಲಿ ವಿಶ್ವಕರ್ಮರ ಪಾತ್ರ ಅಪಾರವಾಗಿದೆ ಎಂದರು.
ನಿರಂಜನಾಚಾರ್ಯ ಸಾಮವೇದಿ ಅವರು ಮಾತನಾಡಿ, ಸಮುದಾಯದ ಬೆಳವಣಿಗೆಗೆ ಹಾಗೂ ಸಮುದಾಯದಲ್ಲಿನ ಶಿಲ್ಪಿಗಳ ಬಗ್ಗೆ ಮುಂದಿನ ತಲೆಮಾರಿಗೂ ಉಳಿಯುವಂತಹ ಕೆಲಸ ಮಾಡಬೇಕೆಂದರು.
ಸಂಘದ ಅಧ್ಯಕ್ಷ ಕೃಷ್ಣಾಚಾರ್ ಅಧ್ಯಕ್ಷತೆ ವಹಿಸಿದ್ದ್ದುದರು. ಆಶಾ ವಿಜಯಕುಮಾರ್. ಕೆಂಪೇಗೌಡ, ವಿಶ್ವನಾಥ, ಮಹಿಳಾ ಒಕ್ಕೂಟದ ಶಾಂತಮ್ಮ, ವಕೀಲ ಲಕ್ಷ್ಮಿಸಾಗರ್ ಉಪಸ್ಥಿತರಿದ್ದರು.
ಬಿ.ಆರ್.ಪಿ ರಾಜಾಚಾರ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.