ಕೊಳ್ಳೇಗಾಲ ಜೆಎಸ್ಬಿ ಪ್ರತಿಷ್ಠಾನದ ವತಯಿಂದ ಆಸಕ್ತ ಕೃಷಿಕರಿಗೆ ಒಂದು ದಿನದ’ಗಿಡಗಳನ್ನು ಕಸಿ (Grafting) ಮತ್ತು ಆಯ್ಕೆ ಮಾಡುವ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಅ. 27 ರಂದು ಭಾನುವಾರ ಬೆಳಿಗ್ಗೆ 10ಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿ ಹತ್ತಿರದ ಹೆಗ್ಗವಾಡಿಪುರ ಗೇಟ್ ಬಳಿಯ ಶಿವಕುಮಾರಸ್ವಾಮಿ ಅವರ ತೋಟದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ವಿವಿಧ ಹಣ್ಣಿನ ಮರಗಳ ತೋಟದ ಸಮಗ್ರ ವೀಕ್ಷಣೆ ಜೊತೆಗೆ ಸಾಕಷ್ಟು ಉಪಯುಕ್ತ ಮಾಹಿತಿಗಳ ವಿನಿಮಯ, ವೈವಿಧ್ಯಮಯ ಗುಣಮಟ್ಟದ. ಸಂಪೂರ್ಣ ಕಸಿ ಮಾಡಿದ ಹಣ್ಣಿನ ಗಿಡಗಳನ್ನೊಳಗೊಂಡ ಸುಂದರ ನರ್ಸರಿ ವೀಕ್ಷಣೆ ಮಾಡಬಹುದು, ವಿವಿಧ ರೀತಿಯ ಕಸಿ ಮಾಡಿದ ಬೀಜದ ಗಿಡಗಳನ್ನು ಕೊಂಡು, ಒಯ್ಯಬಹುದಾಗಿದೆ. ಹೆಚ್ಚಿನ ಮಾಹಿತಿ ಶಿವಕುಮಾರಸ್ವಾಮಿ ಮೊ.7899877940 ಇವರನ್ನು ಸಂಪರ್ಕಿಸಬಹುದು.