ಮದ್ದೂರು ತಾಲೂಕು ಛಾಯಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 183 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸರ್. ಎಂ. ವಿಶ್ವೇಶ್ವರಯ್ಯನವರ ಪ್ರತಿಮೆಗೆ ಪೂಜೆ ಸಲ್ಲಿಸಿ,ನಂತರ ವೀರಯೋಧ ಹುತಾತ್ಮ ಗುರುರವರ ಸ್ಮಾರಕದ ಬಳಿ ಸಸಿ ನೆಡುವುದರ ಮುಖಾಂತರ ಆಚರಿಸಲಾಯಿತು.
ಇಂದು ಬೆಳಿಗ್ಗೆ ಯೋಧ ಗುರುರವರ ಸಮಾಧಿ ಬಳಿ ತೆರಳಿದ ಛಾಯಾಗ್ರಾಹಕ ಸಂಘದ ಸದಸ್ಯರು ಹುತಾತ್ಮ ಯೋಧ ಗುರುರವರ ಸಮಾಧಿಗೆ ನಮನ ಸಲ್ಲಿಸಿದರು.
ಗುರುರವರ ಸಮಾಧಿಯಿರುವ ಉದ್ಯಾನವನದಲ್ಲಿ ತೆಂಗಿನ ಸಸಿ ಹಾಗೂ ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಸ್ತ ಛಾಯಾಗ್ರಾಹಕರಿಗೆ 183 ನೇ ಛಾಯಾಗ್ರಹಣ ದಿನಾಚರಣೆಯ ಶುಭಾಶಯಗಳನ್ನು ಕೋರಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದರ್ಶನ್ ಗೌಡ, ಕಾರ್ಯದರ್ಶಿ ರಾಜೇಶ್, ಖಜಾಂಚಿ ಗುರು ರಾಘವ,ಉಪಾಧ್ಯಕ್ಷ ಮಹಾದೇವಪ್ಪ, ನಿರ್ದೇಶಕರಾದ ಶಶಿ ಗೌಡ,ಅನಿಲ್ ಕುಮಾರ್, ಮಹೇಶ್, ಭೈರವ, ಉಮೇಶ್, ನಾಗರಾಜ್, ಮಹೇಶ್, ಸಂಜು,ಸುರೇಶ್, ನಟೇಶ್,ನಂದೀಶ್, ಜಗದೀಶ್ ಇನ್ನಿತರ ಛಾಯಾಗ್ರಾಹಕರು ಭಾಗವಹಿಸಿದ್ದರು.