ಮಂಗಳವಾರ ಯಾದಗಿರಿ ಜಿಲ್ಲೆಯಲ್ಲಿ ಬುದ್ದ ಧರ್ಮಕ್ಕೆ ಮತಾಂತರ ಗೊಂಡ ಬಳಿಕ ಕೆಲವು ನಾಗರೀಕರು ತಮ್ಮಲ್ಲಿದ್ದ ಹಿಂದೂ ದೇವರ ಫೋಟೋಗಳನ್ನು ನದಿಗೆ ಎಸೆದಿರುವ ಘಟನೆ ವಿವಾದಕ್ಕೆ ಕಾರಣವಾಗಿದೆ.
#Dalit leaders who converted to #Buddhism discarded idols/photos of #Hindu gods, goddesses into Krishna river at Shorapur, #Yadgir district. #Karnataka pic.twitter.com/HRkTfrUxpT
— Imran Khan (@KeypadGuerilla) October 11, 2022
“>
ಜಿಲ್ಲೆಯ ಸುರಪುರ ಪಟ್ಟಣದ ಹುಣಸಗಿಯಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ದಿನ ಅಕ್ಟೋಬರ್ 14ರಂದು ಬುದ್ಧ ಧರ್ಮ ದೀಕ್ಷ ಅಥವಾ ಬುದ್ಧ ಧರ್ಮಕ್ಕೆ ಮತಾಂತರಗೊಳ್ಳುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅಂಬೇಡ್ಕರ್ ಮೊಮ್ಮಗಳಾದ ರಮತಾಯಿ ಅಂಬೇಡ್ಕರ್ ಅವರನ್ನು ಕಾರ್ಯಕ್ರಮಕ್ಕೆ ಸಂಘಟಕರು ಆಹ್ವಾನಿಸಿದ್ದರು.
ಮತಾಂತರಗೊಂಡ ಬಳಿಕ ತಮ್ಮ ಮನೆಯಲ್ಲಿದ್ದ ಹಿಂದೂ ದೇವರುಗಳ ಫೋಟೋಗಳಾದ ವೆಂಕಟೇಶ್ವರ, ಲಕ್ಷ್ಮಿ, ಸರಸ್ವತಿ ಹಾಗೂ ಇತರ ಫೋಟೋಗಳನ್ನು ತೆಗೆದು ನದಿಗೆ ಎಸಲಾಗಿದೆ.