ಮಳವಳ್ಳಿಯ ಟ್ಯೂಷನ್ ಸೆಂಟರ್ ಗೆ ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಕಾಮುಕನೊಬ್ಬ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು, ಮರಣ ಹೊಂದಿದ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿ ಪರಿಹಾರ ನೀಡುವ ಯಾವ ಸೌಜನ್ಯದ ಕೆಲಸವನ್ನೂ ಸರ್ಕಾರ ಮಾಡದೇ ಅಂತರ ಕಾಯ್ದಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಳವಳ್ಳಿ ಬೆಂಗಳೂರಿಗೆ ಅತ್ಯಂತ ಹತ್ತಿರದಲ್ಲಿದ್ದು, ಸಹ ಗೃಹ ಮಂತ್ರಿಗಳು ಮುಖ್ಯಮಂತ್ರಿಗಳು ತಲೆಹಾಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಜಿಲ್ಲೆಯ ಮತ್ತೊಬ್ಬ ಸಚಿವ ನಾರಾಯಣಗೌಡ ಕುಂಭಮೇಳ ಬಿಟ್ಟು ಬೇರೆಯದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.
ಜಿಲ್ಲಾಧಿಕಾರಿ, ಪೋಲಿಸ್ ಇಲಾಖೆಯ ಐಜಿಗಳು, ಉನ್ನತ ಅಧಿಕಾರಿಗಳು ಸಹ ಮಳವಳ್ಳಿಯ ಘಟನೆಯನ್ನು ಅತ್ಯಂತ ಲಘವಾಗಿ ತೆಗೆದುಕೊಂಡಿರುವುದು ಮಳವಳ್ಳಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.