ಸರ್ಕಾರಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಭಿವೃದ್ಧಿಯ ನೆಪದಲ್ಲಿ ಮಕ್ಕಳಿಂದ ತಿಂಗಳಿಗೆ ತಲಾ 100 ರೂಪಾಯಿಯನ್ನು ಕೊಡುವಂತೆ ಆದೇಶ ಹೊರಡಿಸಿತ್ತು.
ಇದರ ಬೆನ್ನಲ್ಲೇ ಮಕ್ಕಳ ಪೋಷಕರು ಮತ್ತು ಸಾರ್ವಜನಿಕರು ಸರ್ಕಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರು ಶಾಲಾ ದೇಣಿಗೆ ಸಂಗ್ರಹಿಸುವುದಕ್ಕೆ ನಾನು ಆದೇಶಿಸಿಲ್ಲ ಎಂದು ಜಾರಿಕೊಂಡಿದ್ದರು.
ಒಟ್ಟರೆಯಾಗಿ ಇವೆಲ್ಲವಕ್ಕೂ ನೊಂದಿದ್ದ ಜನಸಮೂಹ ಸಾಮೂಹಿಕ ಪ್ರತಿರೋಧವನ್ನೇ ಉಂಟುಮಾಡಿದ್ದ ಹಿನ್ನೆಲೆಯಲ್ಲಿ ಇಂದು ಈ ಸುತ್ತೋಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಹಿಂಪಡೆದಿದೆ.