ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ರೈತ ವಿರೋಧಿಯಾಗಿದ್ದು, ಕಾರ್ಖಾನೆಗಳ ಪರವಾಗಿ ಕೆಲಸ ಮಾಡುತ್ತಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಕಿಡಿಕಾರಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಸರ್ಕಾರಗಳು ಸರಾಸರಿ ಇಳುವರಿ 8.5 ಆಧಾರದ ಮೇಲೆ ಕಬ್ಬಿನ ದರ ನಿಗದಿ ಮಾಡುತ್ತಿದ್ದವು, ಆದರೆ ಬಿಜೆಪಿ ಸರ್ಕಾರ ಬಂತ ನಂತರ ಸರಾಸರಿ ಇಳುವರಿ ಪ್ರಮಾಣವನ್ನು 10.05ಕ್ಕೆ ಹೆಚ್ಳಳ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದೆ, ಇದರಂತೆ 1 ಟನ್ ಕಬ್ಬಿಗೆ ಸರಾಸರಿ 102 ಕೆ.ಜಿ.ಸಕ್ಕರೆ ಇಳುವರಿ ನಿಗದಿಗೊಳಿಸಿದೆ, ಇದು ರೈತರನ್ನು ವಂಚಿಸುವ ಕ್ರಮವಾಗಿದೆ ಎಂದರು.