ಪುಷ್ಪಾಂಜಲಿ ಟ್ರಸ್ಟ್ ವತಿಯಿಂದ ಮಂಡ್ಯನಗರ ಆಯ್ದ ನಾಗರೀಕರ ಮನೆಗಳಿಗೆ ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರಿಡಲು ಸಿಮೆಂಟ್ ಬೌಲ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಟಸ್ಟ್ ನ ಸಂಸ್ಥಾಪಕ ಸಂದೀಪ್ ಜೈನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಟ್ರಸ್ಟ್ ವತಿಯಿಂದ ಹಲವು ಜನೋಪಯೋಗಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇವೆ, ಈ ಬಾರಿ 1001 ಸಿಮೆಂಟ್ ಬೌಲ್ ಗಳನ್ನು ಉಚಿತವಾಗಿ ವಿತರಿಸುವ ಕಾರ್ಯ ಮಾಡುತ್ತಿದ್ದೇವೆ ಎಂದರು.
ಗೋಶಾಲೆಯು ತೂಬಿನಕೆರೆಯ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ, ಮುಂಬರುವ ದಿನಗಳಲ್ಲಿ 10ನೇ ತರಗತಿ ಹಾಗೂ ಪಿ.ಯು.ಸಿ: ಮಕ್ಕಳಿಗೆ ಮಾರ್ಗದರ್ಶನಕ್ಕಾಗಿ ಪ್ರವಚನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಗೋಷ್ಠಿಯಲ್ಲಿ ವಿಕಾಸ್ ಬನ್ಸಾಲಿ, ದಿನೇಶ್, ಪ್ರಿಯಾಂಕ ದಲಾಲ್ ಉಪಸ್ಥಿತರಿದ್ದರು.