ದಲಿತ ಮುಖಂಡ ಎಂ.ಬಿ.ಶ್ರೀನಿವಾಸ್ ಅವರು ಒಳ್ಳೆಯ ಕಲಾವಿದರಾಗಿದ್ದರು. ಸಮಾಜ ಸೇವೆಯ ಜೊತೆಯಲ್ಲಿ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿ ದ್ದರು ಎಂದು ಶಾಸಕ ಡಾ.ಕೆ.ಅನ್ನದಾನಿ ಸ್ಮರಿಸಿದರು.
ಡಾ.ಎಂ.ಬಿ.ಶ್ರೀನಿವಾಸ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸಿದ್ದಾರ್ಥ ಕಲಾ ಬಳಗದ ವತಿಯಿಂದ ಮಂಡ್ಯ ನಗರದ ಕಲಾಮಂದಿರದಲ್ಲಿ ನಡೆದ ಶ್ರಿ ಕೃಷ್ಣ ಗೀತೋಪದೇಶ ನಾಟಕ ಪ್ರದರ್ಶನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಎಂ.ಶ್ರೀನಿವಾಸ್ ಅವರು ಡಾ.ಎಂ.ಬಿ.ಶ್ರೀನಿವಾಸ್ ಅವರ ಭಾವ ಚಿತ್ರಕೆ ಪುಷ್ಪ ನಮನ ಸಲ್ಲಿಸಿದರು. ವೇದಿಕೆಯಲ್ಲಿ ಹೆಚ್.ಅರ್.ತಿಮ್ಮೇಗೌಡ , ಮೀರಾಶಿವಲಿಂಗಯ್ಯ , ತಗ್ಗಳ್ಳಿ ವೆಂಕಟೇಶ್ , ಚಾಮಲಾಪುರ ರವಿ , ಶೋಭಾ ಶ್ರೀನಿವಾಸ್, ವಿಶಾಲ್ ರಘು, ಸುರೇಶ್ ಬೊಮ್ಮನಹಳ್ಳಿ ,ಅರುಣ್, ನಗರಸಭಾ ಸದಸ್ಯ ಶ್ರಿಧರ್, ಸಾತನೂರು ಜಯರಾಮ್, ಪುಟ್ಟೇಗೌಡ ,ಫೋಟೋ ಜಗದೀಶ್, ರಘು ಹೊಸಕೆರೆ , ದೇವರಾಜ್ ಕೊಪ್ಪ , ಎಂ.ಬಿ. ಶ್ರೀನಿವಾಸ್ ಪುತ್ರ ರಾಹುಲ್ ಉಪಸ್ಥಿತರಿದ್ದರು.