ಬುದ್ಧ,ಬಸವಣ್ಣ ಜನಿಸಿದ ನಾಡಿದು. ಎಲ್ಲರನ್ನೂ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಧರ್ಮ ನಮ್ಮದು.ಅದಕ್ಕೆ ಧಕ್ಕೆ ಮಾಡಲು ಬಂದಿರುವ ಮನುವಾದಿಗಳೇ ನಿಮ್ಮಆಟ ನಡೆಯಲು ಬಿಡಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಹಿರಿಯ ನಾಯಕ ಗುರು ಪ್ರಸಾದ್ ಕೆರಗೋಡು ಎಚ್ಚರಿಕೆ ನೀಡಿದರು.
ಮಂಡ್ಯದ ಔಷಧಿ ಭವನದಲ್ಲಿ ಇಂದು ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು,ಅಂಬೇಡ್ಕರ್ ಅವರ ಜಾತ್ಯಾತೀತ ಮತ್ತು ಧರ್ಮ ನಿರಪೇಕ್ಷತೆ ತತ್ವದಂತೆ ಹಿಂದೂ-ಮುಸಲ್ಮಾನರು ಒಗ್ಗಟ್ಟಾಗಿ ಸೌಹಾರ್ದತೆಯಿಂದ ಬಾಳುತ್ತಿದ್ದಾರೆ.
ಇಂತಹ ಸೌಹಾರ್ದತೆಯನ್ನು ಸಹಿಸದ ದುಷ್ಟ ಶಕ್ತಿಗಳು ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಈ ದುಷ್ಟಶಕ್ತಿಗಳ ವಿರುದ್ಧ ನಾವೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾದ ಜವಾಬ್ದಾರಿ ನಾಗರೀಕದ್ದಾಗಿದೆ ಎಂದರು.
ಈಗಿರುವುದು ಹಿಂದೂ ಧರ್ಮ ಅಲ್ಲ. ಇರುವುದು ವೈದಿಕ ಧರ್ಮ. ಮನುವಾದಿಗಳೇ ನಿಮ್ಮ ಆಟ ನಮ್ಮ ಮುಂದೆ ನಡೆಯಲು ಬಿಡೋದಿಲ್ಲ ಎಂದು ಸವಾಲು ಹಾಕಿದರು.
ಹಿಂದೂ,ಮುಸಲ್ಮಾನರು ಕೈ ಕೈ ಹಿಡಿದುಕೊಂಡು ಹೋಗುತ್ತೇವೆ.ಯಾರು ಏನು ಮಾಡುತ್ತೀರೋ ನೋಡುತ್ತೇವೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದಿರುವ ಅಪಾಯವನ್ನು ಸೌಹಾರ್ದತೆ ಬಯಸುವ ನಾವೆಲ್ಲಾ ಸೇರಿ ಧೈರ್ಯದಿಂದ ಎದುರಿಸೋಣ ಎಂದರು.