ಮಂಡ್ಯ ನಗರದ 35 ನೇ ವಾರ್ಡಿನ ದೇವೇಗೌಡನದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ನೂತನವಾಗಿ 13.90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಶಾಲಾ ಕೊಠಡಿ ಕಾಮಗಾರಿಗೆ ಶಾಸಕ ಎಂ.ಶ್ರೀನಿವಾಸ್ ಭೂಮಿ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ದೇವೇಗೌಡನದೊಡ್ಡಿ ಗ್ರಾಮದ ರಸ್ತೆ, ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಅಭಿವೃದಿಗೆ ಹಣ ಬಿಡುಗಡೆಯಾಗಿದೆ, ಹಂತ ಹಂತವಾಗಿ ಕಾಮಗಾರಿಗಳು ಆರಂಭಗೊಳ್ಳಲಿದೆ, ನಗರೋತ್ಥಾನ ಯೋಜನೆಯಡಿ ರಸ್ತೆ ಅಭಿವೃದ್ದಿಗೆ ಟೆಂಟರ್ ಆಗಿದೆ, ಅಂಗನವಾಡಿಗೆ 20 ಲಕ್ಷ ರೂ.ಗಳಿಗೆ ಮಂjಜೂರಾಗಿದೆ, ಶಾಲೆ ಕಟ್ಟಡಕ್ಕೆ ಕಳೆದ 5 ತಿಂಗಳಲ್ಲೇ ಹಣ ಬಿಡುಗಡೆಯಾಗಿತ್ತು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಬಿಸಿಯೂಟದ ಕಟ್ಟಡ ಕಾಮಗಾರಿಯು ಅನುನೋದನೆಗೊಳ್ಳಲಿದೆ, ಈ ಗ್ರಾಮದ ಸಮೀಪದಲ್ಲೇ ಖಾಸಗಿ ಶಾಲೆ ಇದೆ, ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಲಿ, ಶೈಕ್ಷಣಿಕ ನೀತಿ ಬದಲಾಗಿದೆ, ವಿಧಾನಸಭೆಯಲ್ಲಿ ಅರ್ಪೂವಲ್ ಪಡೆದುಕೊಳ್ಳಲಿದೆ, ಒಂದೇ ಕಡೆ ಇಂಗ್ಲೀಷ್ ಮತ್ತು ಕನ್ನಡ ಮಾಧ್ಯಮವನ್ನು ಕಲಿಯಲಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಯೋಗೇಶ್, ಶಿಕ್ಷಣ ಇಲಾಖೆ ಕ್ಷೇತ್ರಾಧಿಕಾರಿ ಉದಯ್, ನಗರಸಭಾ ಸದಸ್ಯೆ ಜಿ.ಎನ್. ಲಲಿತಾ, ಮಾಜಿ ಸದಸ್ಯ ಶಂಕರ್, ಅಧಿಕಾರಿಗಳಾದ ಸ್ವಾಮಿ, ಮಧುಸೂದನ್, ಭರತ್, ಮುಖ್ಯಶಿಕ್ಷಕಿ ರೋಜ್ಮರಿಸಿ, ಸಹಶಿಕ್ಷಕಿ ಮಮತಾ, ಶಾಂತಮ್ಮ, ಗ್ರಾಮದ ಮುಖಂಡರು ಹಾಜರಿದ್ದರು.