ಮಂಡ್ಯ ವಿಧಾನಸಭಾ ಕ್ಷೇತ್ರ ಜೆಡಿಎಸ್ ಬಿ.ಪಾರಂ ಅಂತಿಮ ಕ್ಷಣದಲ್ಲಿ ಸಿಕ್ಕಿದ್ದರಿಂದ ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರನ್ನು ಖುದ್ದಾಗಿ ಭೇಟಿ ಮಾಡಿ ಮತಯಾಚನೆ ಮಾಡಲು ಅವಕಾಶ ಸಿಗುತ್ತಿಲ್ಲ, ಆದ್ದರಿಂದ ಪಕ್ಷ ಮುಖಂಡರೆಲ್ಲರೂ ತಾವೇ ಕುಮಾರಸ್ವಾಮಿ, ರಾಮಚಂದ್ರ ಎಂದು ಕೊಂಡು ಸ್ವಯಂ ಪ್ರೇರಿತರಾಗಿ ತಮ್ಮ ಗೆಲುವಿಗೆ ಶ್ರಮಿಸಬೇಕೆಂದು ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಮನವಿ ಮಾಡಿದರು.
ಮಂಡ್ಯನಗರದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಬುಧವಾರ ನಡೆದ ಜೆಡಿಎಸ್ ಪಕ್ಷದ ಮಡಿವಾಳ ಮುಖಂಡರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಹಿಂದುಳಿತ ವರ್ಗಗಳನ್ನು ಮೇಲೆತ್ತಲು ಹೆಚ್.ಡಿ.ದೇವೇಗೌಡರು ಶ್ರಮಿಸಿದ್ದಾರೆ. ಹಾಗೇಯ ಸ್ಥಳೀಯ ಸಂಸ್ಥೆಗಳನ್ನು ಶೇ.50 ಮಹಿಳಾ ಮೀಸಲಾತಿ ಸಿಗಲು ಜೆಡಿಎಸ್ ಪಕ್ಷ ಶ್ರಮ ಅಪಾರವಾಗಿದೆ. ಹಿಂದುಳಿದವರ ಪ್ರಗತಿಗಾಗಿ ಜೆಡಿಎಸ್ ಅಪಾರವಾದ ಅನುದಾನ ಕೊಟ್ಟಿದೆ, ಆದ್ದರಿಂದ ಹೆಚ್.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಎಲ್ಲರೂ ಶ್ರಮಿಸಬೇಕೆಂದು ಮನವಿ ಮಾಡಿದರು.
ಈ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ ಗೆಲ್ಲಿಸಿದರೆ ಮುಂದಿನ 5 ವರ್ಷಗಳ ಕಾಲ ನಿಮ್ಮ ಸೇವಕನಾಗಿ ಸೇವೆ ಮಾಡುತ್ತೇನೆ, ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ತಮ್ಮ ಗೆಲುವಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ನಗರಸಭಾಧ್ಯಕ್ಷ ಹೆಚ್.ಎಸ್.ಮಂಜು, ನಗರಸಭೆ ಮಾಜಿ ಅಧ್ಯಕ್ಷೆ ಕೆ.ಸಿ.ನಾಗಮ್ಮ, ಮುಖಂಡರಾದ ಮಂಜುನಾಥ್, ಪದ್ಮಾವತಿ ಮತ್ತತರರಿದ್ದರು.