Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ | ಬಿರುಗಾಳಿ ಮಳೆಗೆ ಹಾರಿ ಹೋದ ಮನೆಯ ಮೇಲ್ಚಾವಣೆ

ಗುರುವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಮನೆಯ ಮೇಲ್ಚಾವಣೆ ಹಾರಿ ಹೋಗಿದ್ದು, ಮನೆಯ ಮಾಲೀಕನಿಗೆ ಸುಮಾರು ಒಂದು ಲಕ್ಷ ರೂ. ನಷ್ಟವಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮದ ರಾಚಯ್ಯರವರ ಪುತ್ರ ಆರ್. ಶಿವಕುಮಾರ್ ಎಂಬುವವರಿಗೆ ಸೇರಿದ ಮನೆ ಮಳೆಯಿಂದ ಹಾನಿಕೊಳಗಾಗಿದೆ.

ಹೈನುಗಾರಿಕೆ ಮಾಡಲು ಕಟ್ಟಲಾಗಿದ್ದ ಮನೆಯ ಮೇಲ್ಚಾವಣಿ ಬಾರಿ ಬೀರುಗಾಳಿಗೆ ಸೀಟು ಹಾಗೂ ಕಬ್ಬಿಣದ ಕಂಬಗಳ ಸಮೇತ ಕಿತ್ತು ಬಂದಿದೆ. ಮೇಲ್ಚಾವಣಿಯ ಸೀಟುಗಳು ಸಂಪೂರ್ಣ ಜಖಂಗೊಂಡಿವೆ. ಮಳೆ ಬಂದಿದ್ದರಿಂದ ಹಸು ಮತ್ತು ಕೋಳಿಯನ್ನು ಮನೆಯೊಳಕ್ಕೆ ಕಟ್ಟಿ ಹೊರ ಬರುತ್ತಿದ್ದಂತೆ ಗಾಳಿಗೆ ಮೇಲ್ಚಾವಣೆ ಹಾರಿ ಹೋಗಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!