ಸುಮಾರು 25 ರಿಂದ 30ರ ವಯೋಮಾನದ ಅಪರಿಚಿತ ಯುವಕ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮಂಡ್ಯ ಹಾಗೂ ಹನಕೆರೆ ರೈಲು ನಿಲ್ದಾಣಗಳ ನಡುವೆ ಸಂಭವಿಸಿದೆ.
ರೈಲಿಗೆ ಸಿಲುಕಿರುವ ಈತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದ್ದು, ತಲೆಯ ಭಾಗ ಛಿದ್ರಗೊಂಡಿದ್ದು, ಮೃತನ ಬಲ ತೋಳಿನಲ್ಲಿ `ಅಮ್ಮ ಎಸ್’ ಎಂಬ ಹಚ್ಚೆ ಗುರುತಿದೆ.
ಕಿತ್ತಳೆ ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ತೊಟ್ಟಿರುವ ಈ ಯುವಕನ ಶವವನ್ನು ಮಂಡ್ಯ ಮಿಮ್ಸ್ ಶವಾಗಾರದಲ್ಲಿರಿಸಲಾಗಿದೆ. ವಾರಸುದಾರರಿದ್ದಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂ:0821-2516579 ಗೆ ಸಂಪರ್ಕಿಸುವಂತೆ ಕೋರಲಾಗಿದೆ.