ಕೃಷ್ಣರಾಜಸಾಗರದ 20 ಕಿ.ಮೀ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಸಿದ್ದತೆ ನಡೆದಿದ್ದು, ಇದನ್ನು ವಿರೋಧಿಸಿ ರಾಜ್ಯ ರೈತಸಂಘ ನಾಳೆ (ಮಾ.5) ಬೆಳಿಗ್ಗೆ 10 ಗಂಟೆಗೆ ಕೆ.ಆರ್.ಎಸ್ ಸಮೀಪದ ನಾರ್ಥ್ ಬ್ಯಾಂಕ್ ಬಳಿ ಗೋಬ್ಯಾಕ್ ಚಳವಳಿ ಹಮ್ಮಿಕೊಂಡಿದೆ.
ಜಾರ್ಖಂಡ್ ಮೂಲದ ಟ್ರಯಲ್ ಬ್ಲಾಸ್ಟಿಂಗ್ ನಡೆಸುವ ತಂಡ ಪಾಂಡವಪುರ ತಾಲ್ಲೂಕಿನ ಬೇಬಿ ಬಳಿ ಟ್ರಯಲ್ ಬ್ಲಾಸ್ಟ್ ಮಾಡಲು ಇಂದು (ಮಾ.4) ರಾತ್ರಿ ಕೆ ಆರ್ ಎಸ್ ಗೆ ಬರುತ್ತಿದ್ದು, ಇದರ ವಿರುದ್ಧ ಗೋಬ್ಯಾಕ್ ಚಳವಳಿ ಹಮ್ಮಿಕೊಂಡಿದ್ದು, ರೈತಸಂಘದ ಕಾರ್ಯಕರ್ತರು, ಕಾವೇರಿ ನೀರು ಬಳಸುವ ಬಳಕೆದಾರರು, ಪ್ರಗತಿಪರ ಸಂಘಟನೆಗಳ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮನವಿ ಮಾಡಿದ್ದು, ಕೆ ಆರ್ ಎಸ್ ಅಣೆಕಟ್ಟು ಉಳಿಸುವ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ.