ಮದ್ದೂರು ತಾಲ್ಲೂಕಿನ ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಭಾರತೀನಗರದ ಮಾದೇಗೌಡ ಬಡಾವಣೆಯ ನಿವಾಸಿ ಜೆ.ರವಿ ಆಯ್ಕೆಯಾಗಿದ್ದಾರೆ.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಜೆ.ರವಿ ಅವರು ಮಾತನಾಡಿ, ನಾನು ಪ್ರಮಾಣಿಕತೆಯಿಂದ ತಾಲ್ಲೂಕು ಕಚೇರಿಯ ಕೆಲಸಗಳನ್ನು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ನನ್ನನ್ನು ಗುರುತಿಸಿ ಆಡಳಿತಾಧಿಕಾರಿಗಳ ಸಂಘಕ್ಕೆ ನೇಮಕ ಮಾಡಿದ್ದಾರೆ. ನನ್ನನ್ನು ಆಯ್ಕೆಗೊಳಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದರು.
ಇದೇ ವೇಳೆ ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್, ರೇವಣ್ಣ, ಟಿ,ಪಿ.ಮೋಹನ, ಹರೀಶ್, ಚನ್ನಬಸವಪ್ಪ, ಸೇರಿದಂತೆ ಹಲವರಿದ್ದರು. ನಂತರ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಅವರು ಅವರು ಜೆ.ರವಿ ಅವರನ್ನು ಅಭಿನಂದಿಸಿದರು.