Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮುಸ್ಕಾನ್ ಕುಟುಂಬ ವಿಚಾರಣೆಗೆ ಒಳಪಡಿಸಲು ಆಗ್ರಹ

ಹಿಜಾಬ್ ವಿವಾದದಿಂದ ದೇಶದ ಗಮನ ಸೆಳೆದಿದ್ದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್ ಅವರ ಕುಟುಂಬ ವಿದೇಶ ಪ್ರವಾಸದಿಂದ ಬಂದ ಬಳಿಕ ವಿಚಾರಣೆಗೊಳಪಡಿಸಿ ಮಂಪರು ಪರೀಕ್ಷೆ ಮಾಡಬೇಕೆಂದು ಹಿಂದೂಪರ ಕಾರ್ಯಕರ್ತ ಅನಿಲ್ ಮರೀಗೌಡ ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ಧಿಗೋಷ್ಟಿ ನಡೆಸಿದ ಅವರು, ಮುಸ್ಕಾನ್ ಅವರ ಕುಟುಂಬ ಏಪ್ರಿಲ್ 25ರಂದು ಧಾರ್ಮಿಕ ಯಾತ್ರೆ ಎಂದು ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಆದ್ದರಿಂದ ಮೇ.14ರಂದು ವಿದೇಶ ಪ್ರಯಾಣ ಮುಗಿಸಿ ಮಂಡ್ಯಕ್ಕೆ ಆಗಮಿಸುತ್ತಿರುವ ಮುಸ್ಕಾನ್ ಕುಟುಂಬವನ್ನು ತನಿಖೆಗೊಳಪಡಿಸಿ ಮಂಪರು ಪರೀಕ್ಷೆ ಮಾಡಿ ನಿಜಾಂಶವನ್ನು ತಿಳಿಯಬೇಕೆಂದು ಆಗ್ರಹಿಸಿದರು.

ಒಂದು ವೇಳೆ ಪೋಲಿಸರು ತನಿಖೆ ನಡೆಸದಿದ್ದರೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಶಿವಕುಮಾರ ಆರಾಧ್ಯ, ನವನೀತ್‌ಗೌಡ, ಶಿವಲಿಂಗಯ್ಯ, ಶಿವಕುಮಾರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!