ಮಂಡ್ಯನಗರದ ಕಾಮನಗುಡಿ ಸರ್ಕಲ್ ಬಳಿಯ ಕಾಮನಗುಡಿ ಸರ್ಕಲ್ ಬಳಿಯ ತೇರಾಪಂಥ್ ಸಭಾ ಭವನದಲ್ಲಿ ಸೆ.26ರಂದು ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತೀಯ ತೇರಾಪಂಥ್ ಯುವಕರ ಪರಿಷತ್ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವು ನಮ್ಮ ಸಂಘದಿಂದ ರಕ್ತದಾನ ಶಿಬಿರ ನಡೆಸಿಕೊಂಡು ಬರುತ್ತಿದ್ದೇವೆ, ಕಳೆದ ವರ್ಷ 402 ಯುನಿಟ್ ರಕ್ತ ಸಂಗ್ರಹಿಸಿ ಮಂಡ್ಯ ಮಿಮ್ಸ್ ಗೆ ನೀಡಿದ್ದೇವು, ಈ ಬಾರಿ ಸುಮಾರು 650 ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದೇವೆ, ಆದ್ದರಿಂದ ಆಸಕ್ತ ದಾನಿಗಳು ಆಗಮಿಸಿ ರಕ್ತದಾನ ಮಾಡಬೇಕೆಂದು ಮನವಿ ಮಾಡಿದರು.
ರಕ್ತದಾನದ ಅಮೃತ ಸ್ಮರಣೋತ್ಸವ ಅಂಗವಾಗಿ “ಕಾರ್ಪೊರೇಟ್ (ಸಂಸ್ಥೆ)ಗಳನ್ನು ರಕ್ತದಾನದ ಮೂಲಕ ಒಂದುಗೂಡಿಸುವುದು, ತಮ್ಮ ಸ್ವ ಇಚ್ಚೆಯಿಂದ ರಕ್ತದಾನ ಮಾಡಿ ಹಲವಾರು ಜೀವಗಳನ್ನು ಉಳಿಸಿ ಎಂಬ ಘೋಷಣೆಯೊಂದಿಗೆ ಶಿಬಿರ ಆಯೋಜಿಸಿದ್ದೇವೆ ಎಂದರು.
ಈ ಶಿಬಿರದ ಪ್ರಯೋಜನೆಯನ್ನು ಕರ್ಣಾಟಕ ಬ್ಯಾಂಕ್ ಮಾಡಲಿದ್ದು, ನೋಂದಣಿಗಾಗಿ ಮೊ.9844735031, 9844474113 9886108013, 9972477609 ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕಮಲೇಶ್, ರಾಕೇಶ್, ನೇಮಿಚಂದ್ರ, ಪ್ರದೀಪ್ ಬನ್ಸಾಲಿ ಉಪಸ್ಥಿತರಿದ್ದರು.