ನಾಗಮಂಗಲ ತಾಲೂಕು ರಾಜ್ಯ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ಸಭೆಯನ್ನು ಅಧ್ಯಕ್ಷ ಸಿ.ಜೆ. ಕುಮಾರ್ ರವರ ನೇತೃತ್ವದಲ್ಲಿ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜನೆ ಮಾಡಲಾಯಿತು ಗಣ್ಯರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿ ಮತ್ತು 2022-23 ನೇ ಸಾಲಿನ ಖರ್ಚು ವೆಚ್ಚಗಳ ಮಂಡನೆಯನ್ನು ವೇದಿಕೆಯಲ್ಲಿ ಸಂಘದ ಸದಸ್ಯ ವೈ.ಡಿ. ಶಿವಣ್ಣ ಸಭೆಗೆ ಒಪ್ಪಿಸಿದರು
ಸಂಘದ ಅಧ್ಯಕ್ಷ ಸಿ.ಜೆ. ಕುಮಾರ್ ಮಾತನಾಡಿ, ಸರ್ಕಾರಿ ನೌಕರರ ಈ ಸಂಘವು ಎಲ್ಲರ ಒಗ್ಗಟ್ಟಿನಿಂದ ಸದೃಢವಾಗಿದೆ. ಸಂಘದಿಂದ ಸಾಲವನ್ನು ಪಡೆದು ಮರು ಪಾವತಿ ಮಾಡುವ ಜೊತೆಗೆ ಸರ್ವ ಸದಸ್ಯರು ಕೂಡ ಸಂಘದಲ್ಲಿ ಠೇವಣಿ ಇಡಲು ಪ್ರಾರಂಭ ಮಾಡಿ, ಏಕೆಂದರೆ ನಿಮ್ಮ ಜೊತೆ ಸಂಘವೂ ಕೂಡ ಸದೃಢವಾಗಬೇಕು. ಬ್ಯಾಂಕಿನ ರೀತಿಯಲ್ಲಿ ನಿಮಗೆ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯುತ್ತವೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕರಾಗಿ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಗೌರವಿಸಿ ಸನ್ಮಾನಿಸಲಾಯಿತು. ಸಭೆಯಲ್ಲಿ ನಾಗಮಂಗಲ ತಾಲೂಕಿನ ಎಲ್ಲ ನೌಕರ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಇಲಾಖೆ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ಸಂಘದ ನಿರ್ದೇಶಕರು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.