Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಂಗಲದಲ್ಲಿ ಮಹಿಷ ಉತ್ಸವ ಆಚರಣೆ

ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿರುವ ಮಹಿಷಾಸುರ ಪ್ರತಿಮೆಗೆ ಸಮಾನ ಮಸ್ಕರ ವೇದಿಕೆ ಸೇರಿದಂತೆ ಹಲವು ಪ್ರಗತಿಪರ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ಮಹಿಷ ಉತ್ಸವವನ್ನು ಆಚರಣೆ ಮಾಡಿದರು.

ಮಹಿಷಾ ಉತ್ಸವ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನೆರೆದಿದ್ದ ಜನರಿಗೆ ಸಿಹಿ ವಿತರಣೆ ಮಾಡುವ ಮೂಲಕ ಪರಿಸರ ಪ್ರೇಮಿ ಮತ್ತು ನಾಡದೊರೆ ನಾಡ ರಕ್ಷಣೆಯ ಮಹಾಸುರ ದೊರೆ ಘೋಷವಾಕ್ಯಗಳನ್ನು ಕೂಗಿದರು, ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸಿದರು. ದೇವಾಲಯದಲ್ಲಿ ಪೂಜೆ ನಡೆಯಿತು ಸಿಹಿ ವಿತರಣಾ ಕಾರ್ಯಕ್ರಮವು ಜರುಗಿತು.

ಸಮಾನ ಮನಸ್ಕರ ವೇದಿಕೆ ಯುವ ಮುಖಂಡ ಮಂಗಲ ಲಂಕೇಶ್, ಡಿಎಸ್ಎಸ್ ಮುಖಂಡ ಪ್ರಸನ್ನ ತೂಬಿನಕೆರೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಹದೇವು, ಕುಮಾರ್ ಗೌಡ, ಡಿಎಸ್ಎಸ್ ಮುಖಂಡ ಸಂತೋಷ್, ಉಮಾಪತಿ, ಕೊತ್ತತ್ತಿ ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!