Friday, September 20, 2024

ಪ್ರಾಯೋಗಿಕ ಆವೃತ್ತಿ

ಔಷಧ ವ್ಯಾಪಾರಿಗಳ ಹಿತ ಕಾಪಾಡಲು ಸಂಘವು ಯಾವಾಗಲೂ ಬದ್ಧ : ಅಧ್ಯಕ್ಷ ಲೋಕಾನಂದ

ಔಷಧ ವ್ಯಾಪಾರಿಗಳ ಹಿತ ಕಾಪಾಡಲು ಸಂಘವು ಯಾವಾಗಲೂ ಬದ್ಧವಾಗಿರುತ್ತದೆ ಎಂದು ಮಂಡ್ಯ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಎಂ. ಪಿ. ಲೋಕಾನಂದ ಹೇಳಿದರು.

ಅವರು ಭಾನುವಾರ ಮಂಡ್ಯ ನಗರದ ಔಷಧ ಭವನದಲ್ಲಿ ನಡೆದ ಔಷಧ ವ್ಯಾಪಾರಿಗಳ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಔಷಧ ವ್ಯಾಪಾರವು ಸೇವಾ ಮನೋಧರ್ಮ ವ್ಯಾಪಾರವಾಗಿದ್ದು ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಔಷಧ ವ್ಯಾಪಾರಿಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಆದ್ದರಿಂದ ಔಷದ ವ್ಯಾಪಾರಿಗಳು ಬಹು ಎಚ್ಚರಿಕೆಯಿಂದ ವ್ಯಾಪಾರ ಮಾಡಬೇಕೆಂದು ಕಿವಿಮಾತು ಹೇಳಿದರು.

ನಂತರ ಔಷದ ವ್ಯಾಪಾರದಲ್ಲಿ 25 ವರ್ಷ ಪೂರೈಸಿದ ಹಿರಿಯ ವ್ಯಾಪಾರಿಗಳಿಗೆ ಹಾಗೂ ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿಯಲ್ಲಿ ಕಳೆದ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ಒನ್ ಫಾರ್ಮಸಿ ಫಾರ್ಮ ಸಾಫ್ಟ್ವೇರ್ ಕಂಪನಿಯಿಂದ ಸಾಫ್ಟ್ ವೇರ್ ಬಗ್ಗೆ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಬಿ. ನಾರಾಯಣ್. ಪ್ರಭುಲಿಂಗೇಗೌಡ. ಕಾರ್ಯದರ್ಶಿ ಬಿ. ನಂದೀಶ. ಸಹ ಕಾರ್ಯದರ್ಶಿ ದೇವೇಗೌಡ. ಖಜಾಂಚಿ ಶ್ರೀನಿವಾಸ್. ನಿರ್ದೇಶಕರುಗಳಾದ ಮಂಜುನಾಥ್. ದೊಡ್ಡ ಲಿಂಗೇಗೌಡ. ರಾಘವೇಂದ್ರ. ವೇಣು. ಚಂದ್ರು. ಸತ್ಯವತಿ. ಪಾಂಡುಪುರ ಕೃಷ್ಣ ಇತರರು ವೇದಿಕೆಯಲ್ಲಿ ಉಪಸಿತರಿದ್ದರು.

ಮಂಡ್ಯ ಜಿಲ್ಲೆಯಾದ್ಯಂತ ಸದಸ್ಯರು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಆಗಮಿಸಿದ್ದು, ಸಭೆಯು ಬಹಳ ಯಶಸ್ವಿಯಾಗಿ ಜರುಗಿತು ಎಂದು ಸಂಘದ ವಕ್ತಾರ ಮಂಜುನಾಥ್ ರವರು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!