ಅಂತರರಾಷ್ಟ್ರೀಯ ಅಲಯನ್ಸ್ ಕ್ಲಬ್ ಜಿಲ್ಲೆ 268 ರ ಜಿಲ್ಲಾ ರಾಜ್ಯಪಾಲರಾಗಿ ಮಂಡ್ಯದ ಕೆ.ಟಿ.ಹನುಮಂತು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ದೆಹಲಿ ಆಗ್ರಾದ ಜೆಪಿ ಪ್ಯಾಲೇಸ್ ಹೋಟೆಲ್ ನಲ್ಲಿ ಮಾ.15 ರಿಂದ ಮಾ.18 ರವರೆಗೆ ನಾಲ್ಕು ದಿನಗಳ ಕಾಲ ನಡೆದ ಅಲಯನ್ಸ್ 16 ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಜಿಲ್ಲೆ 268 ರ (ಮಂಡ್ಯ ಹಾಗೂ ರಾಮನಗರ ರೆವಿನ್ಯೂ ಜಿಲ್ಲೆ) ಜಿಲ್ಲಾ ರಾಜ್ಯಪಾಲರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಬಳಿಕ ಜಿಲ್ಲಾ ರಾಜ್ಯಪಾಲರಾಗಿ ಅಂತರಾಷ್ಟ್ರೀಯ ಅಲಯನ್ಸ್ ಕ್ಲಬ್ಸ್ ನ ಅಧ್ಯಕ್ಷ ಬಾಲಚಂದ್ರನ್ ಸಿ.ರವರಿಂದ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಅಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಶ್ರೀನಿವಾಸ್ ಗಿರಿ ಆಯ್ಕೆ ಪತ್ರವನ್ನು ರಾಜ್ಯಪಾಲ ಕೆ.ಟಿ.ಹನುಮಂತುರವರಿಗೆ ವಿತರಣೆ ಮಾಡಿದರು. ಜಿಲ್ಲೆ 268 ರ ಒಂದನೇ ಉಪರಾಜ್ಯಪಾಲ ಎಚ್.ಮಾದೇಗೌಡ ಇದ್ದರು.