ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಸಂಸ್ಥಾಪಕ ಹಾಗೂ ರಾಜ್ಯ ಅಧ್ಯಕ್ಷರಾಗಿದ್ದ ದಿ.ನಾಗಣ್ಣ ಬಾಣಸವಾಡಿ ರವರ ಒಂದನೇ ವರ್ಷದ ಪುಣ್ಯಸ್ಮರಣೆಯನ್ನು ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಸೇವಾ ಟ್ರಸ್ಟ್ ವತಿಯಿಂದ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಕಚೇರಿ ಆಭರಣದಲ್ಲಿ ಆಚರಿಸಲಾಯಿತು. ದಿ.ನಾಗಣ್ಣ ಬಾಣಸವಾಡಿ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಂಡ್ಯ ಜಿಲ್ಲಾಧ್ಯಕ್ಷರಾದ ಕೆ ಸಿ ರವೀಂದ್ರ ಮಾತನಾಡಿ , ಸಂಘವನ್ನು ಕಟ್ಟಲು ತಮ್ಮ ಜೀವವನ್ನೇ ಮುಡುಪಾಗಿಟ್ಟು ಉತ್ತರ ಕರ್ನಾಟಕದ ಕೂಡು ಒಕ್ಕಲಿಗರನ್ನು ಸಂಘಟಿಸಿದ್ದವರು. ಈ ಒಂದು ಸಂಘಟನೆಯೂ ಬೃಹತ್ ಮಟ್ಟದಲ್ಲಿ ಬೆಳೆಯಲು ತುಂಬಾ ಶ್ರಮಿಸಿದವರು ಎಂದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಲ್ ಕೃಷ್ಣ ಮಾತನಾಡಿ , ನಮ್ಮ ಸಮುದಾಯದ ಪ್ರತಿಭಾನ್ವಿತ ವಿಧ್ಯಾರ್ಥಿಗೆಳಿಗೆ ಹಾಗೂ ಅಧಿಕಾರಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರಗಳನ್ನು ನೀಡುತ್ತಾ ಬಂದಿದ್ದಾರೆ ಅದೇ ರೀತಿ ನಾವುಗಳು ಸಹ ಮುಂದುವರೆಸುತ್ತೆವೆ ಎಂದರು.
ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷರಾದ ನ.ಲಿ.ಕೃಷ್ಣ ಮಾತನಾಡಿ , ರಾಜ್ಯಮಟ್ಟದಲ್ಲಿ ಹಾಗೂ ಜಿಲ್ಲಾಮಟ್ಟದಲ್ಲಿ ಒಕ್ಕಲಿಗರ ಸಂಘವನ್ನು ಕಟಿ ಬೆಳಸಿದ್ದವರು ನಮ್ಮ ನಾಗಣ್ಣ ಬಾಣಸವಾಡಿ ಎಂದು ಸ್ಮರಿಸಿದರು.
ಒಕ್ಕಲಿಗರ ಸೇವಾ ಟ್ರಸ್ಟ್ ಗೌರವಾಧ್ಯಕ್ಷರಾದ ತಮ್ಮಯ್ಯ ಮಾತನಾಡಿ , ಇಡೀ ರಾಜ್ಯದಲ್ಲಿ ಸುತ್ತಿ ಒಕ್ಕಲಿಗರ ಸಂಘವನ್ನು ಕಟ್ಟಿದ ನಾಗಣ್ಣ ಬಾಣಸವಾಡಿ ರವರ ಕಾರ್ಯ ಶ್ಲಾಘನೀಯ ಎಂದರು. ಇದೆ ಸಂದರ್ಭದಲ್ಲಿ ಸೇವಾ ಕಿರಣ ವೃದ್ದಾಶ್ರಮದಲ್ಲಿ ಹಿರಿಯ ನಾಗರೀಕರಿಗೆ ಹಣ್ಣುಗಳನ್ನು ವಿತರಿಸಲಾಯಾಯಿತು.
ಈ ಸಂದರ್ಭದಲ್ಲಿ ಕೃಷ್ಣೇಗೌಡ, ನಾಗಲಿಂಗಪ್ಪ, ಬೋರೇಗೌಡರು, ಶಿವಲಿಂಗೇಗೌಡರು, ಮುರಳಿ , ಚಂದ್ರು ,ಜಲೇಂದ್ರ, ಗಣೇಶ , ಶಿವಶಂಕರ್ ಸೇರಿದಂತೆ ಹಲವಾರು ಉಪಪಸ್ಥಿತರಿದ್ದರು.