ಹಾಸನದ ಪ್ರತಿಷ್ಠಿತ ಕುಟುಂಬದ ವಿಕೃತ ಯುವ ರಾಜಕಾರಣಿಯ ಕಾಮದಾಹಕ್ಕೆ ಮಂಡ್ಯ ನಗರದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಪೆನ್ ಡ್ರೈವ್ ನಲ್ಲಿರುವ ವೀಡಿಯೋದಿಂದ ಬಯಲಾಗಿದೆ.
ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿರುವ ಕುಟುಂಬವೊಂದರ ಮಹಿಳೆ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ಆಕೆಯ ಪತಿ ಕೂಡ ಸರ್ಕಾರಿ ಉದ್ಯೋಗಿ. ಈಗ ಆ ಮಹಿಳೆಯ ಹೆಸರು, ವಿಕೃತ ಯುವ ರಾಜಕಾರಣಿಯ ತೆವಲಿನಿಂದ ಬೀದಿಗೆ ಬಂದಿದೆ.
ಎಂಟು ಜಿಬಿ ಪೆನ್ ಡ್ರೈವ್ ನಲ್ಲಿರುವ ಕಾಮಕೇಳಿಯಲ್ಲಿ ಈ ಮಹಿಳೆಯ ವೀಡಿಯೋ ಕೂಡ ಇದ್ದು, ಆಕೆಯ ಸುಂದರ ಸಂಸಾರಕ್ಕೆ ಹುಳಿ ಹಿಂಡಿದೆ. ಈ ವೀಡಿಯೋ ಬಯಲಾದ ನಂತರ ಆ ಮಹಿಳೆ ಮತ್ತವರ ಕುಟುಂಬಸ್ಥರು ಮಾನಸಿಕ ನೆಮ್ಮದಿ ಕಳೆದು ಕೊಂಡಿದ್ದಾರೆ. ಪತಿ ಪತ್ನಿಯ ನಡುವೆ ಇದ್ದ ಸುಮಧುರ ಬಾಂಧವ್ಯಕ್ಕೆ ಕೊಳ್ಳಿಯಿಟ್ಟಿದ್ದಾನೆ ಕಾಮುಕ ರಾಜಕಾರಣಿ. ಮಹಿಳೆಯ ಕುಟುಂಬಸ್ಥರು, ಹಿತೈಷಿಗಳು, ಸ್ನೇಹಿತರಲ್ಲಿ ಆ ವಿಕೃತ, ಕೀಚಕ ರಾಜಕಾರಣಿಯ ವಿರುದ್ಧ ಆಕ್ರೋಶ ಮಡುಗಟ್ಟಿದೆ.
ಕಾಮುಕ ಯುವನಾಯಕ ಬೇರೆ ಬೇರೆ ಕಾರಣಗಳಿಗೆ ತನ್ನ ಬಳಿ ಬಂದ ಹೆಣ್ಣಮಕ್ಕಳನ್ನು ಮನವೊಲಿಸಿ, ಪುಸಲಾಯಿಸಿ, ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆ ತೀರಿಸಿಕೊಂಡಿರುವುದಲ್ಲದೆ, ಎಲ್ಲರ ಜೊತೆಗಿನ ಕಾಮದಾಟವನ್ನು ತಾನೇ ರೆಕಾರ್ಡ್ ಮಾಡಿ ವಿಕೃತಿ ಮೆರೆದಿದ್ದಾನೆ ಎಂದು ರಾಜ್ಯಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ನೀಚನ ಕಾಮಕೇಳಿಯ ವೀಡಿಯೋಗಳಲ್ಲಿರುವ 2957 ಮಹಿಳೆಯರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಸುದ್ದಿ ಕೂಡ ಕೇಳಿ ಬಂದಿದೆ. ಈ ಕಾಮುಕ ರಾಜಕಾರಣದ ಪ್ರಭಾವದಿಂದ ಅಸಹಾಯಕ ಮಹಿಳೆಯರನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಲ್ಲದೆ, ವೀಡಿಯೋ ಮಾಡಿಕೊಂಡು ಜಗತ್ತಿನಲ್ಲಿ ಬೆತ್ತಲಾಗಿದ್ದಾನೆ. ಇವನ ಕಾಮದಾಹಕ್ಕೆ ಬಲಿಯಾದ ಮಹಿಳೆಯರಿಗೆ ಅವರ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು ಮಾನಸಿಕ ಸ್ಥೈರ್ಯ ತುಂಬಬೇಕಿದೆ. ಸರ್ಕಾರ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಬೇಕಿದ್ದು,ಈ ಕೂಡಲೇ ಆ ಕಾಮುಕ ರಾಜಕಾರಣಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಠಿಣ ಶಿಕ್ಷೆ ಕೊಡಿಸುವ ಮೂಲಕ ಇಂತಹ ಕೀಚಕತನಕ್ಕೆ ಕೈ ಹಾಕುವವರಿಗೆ ಸರಿಯಾದ ಪಾಠ ಕಲಿಸಬೇಕಿದೆ.
ಇನ್ನು ಈ ಕೀಚಕ ರಾಜಕಾರಣಿಯನ್ನು ಸಮರ್ಥಿಸಿಕೊಳ್ಳುವ ಇವನದೇ ಮನಸ್ಸಿನ ವಿಕೃತರ ಸಂಖ್ಯೆಯೇನೂ ಕಡಿಮೆಯಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಮರ್ಥಿಸಿಕೊಳ್ಳುವ ಇಂತಹ ವಿಕೃತರ ಮನೆಯ ಮಹಿಳೆಯರಿಗೆ ಈ ಪರಿಸ್ಥಿತಿ ಬಂದಿದ್ದರೆ ಆಗಲೂ ಹೀಗೆ ಸಮರ್ಥಿಸಿಕೊಳ್ಳುತ್ತಿದ್ದರೇ ?. ಈತನ ವಿಕೃತಿಗೆ ಇನ್ನೆಷ್ಟು ಕುಟುಂಬಗಳ ಮರ್ಯಾದೆ ಬೀದಿಗೆ ಬರುತ್ತದೋ ಎಂಬ ವಿಷಯ ಕೇಳಿ ರಾಜ್ಯದ ಜನರೇ ಆತಂಕಗೊಂಡಿದ್ದಾರೆ.
ಹಣ, ಅಧಿಕಾರ ದರ್ಪದಿಂದ ಮಹಿಳೆಯರನ್ನು ಕಾಮದಾಹಕ್ಕೆ ಬಳಸಿಕೊಂಡಿರುವ ಈತನ ಮೇಲೆ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಸಂತ್ರಸ್ಥ ಮಹಿಳೆಯ ರಕ್ಷಣೆಗೆ ನಿಲ್ಲಲಿ ಎಂದು ವಿವಿಧ ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳು ಆಗ್ರಹಿಸಿವೆ.