ಕಳೆದ ಮೇ.27 ರಂದು ಬಹಳ ವಿಜೃಂಭಣೆಯಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದು, ದೇಶದಾದ್ಯಂತ ಇರುವ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಗಡ್ಕರಿ ಅವರಿಗೆ ಶುಭಾಶಯ ಕೋರಿ ಸಂದೇಶಗಳನ್ನು ಕಳುಹಿಸಿದ್ದು,ಪೋನ್ ಕರೆಗಳನ್ನು ಮಾಡಿದ್ದು, ಬೇರೆಯದೆ ಆದ ಸಂಕೇತಗಳನ್ನು ರಾಜಕಾರಣದಲ್ಲಿ ನೀಡುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಚರ್ಚಿಸುತ್ತಿದ್ದಾರೆ.
ಈ ಬಾರಿ ಬಿಜೆಪಿಗೆ ಸ್ಪಷ್ಟವಾದ ಬಹುಮತ ಬರದೇ ಹೋದ ಪಕ್ಷದಲ್ಲಿ ನಿತಿನ್ ಗಡ್ಕರಿ ಅವರ ಕೈ ಮೇಲಾಗುವುದಲ್ಲದೆ, ದೇಶದಲ್ಲಿರುವ ಎರಡನೇ ಹಂತದ ಬಿಜೆಪಿ ನಾಯಕರು ಗಡ್ಕರಿ ಅವರ ಜೊತೆ ನಿಲ್ಲುತ್ತಾರೆ ಎನ್ನುವ ಸುದ್ದಿಗಳಿವೆ.
ಹಾಗಾಗಿ ಗಡ್ಕರಿ ಅವರ ಜನ್ಮದಿನವನ್ನು ಅವರ ಅಭಿಮಾನಿಗಳು ನಿನ್ನೆ ವಿಜೃಂಭಣೆಯಿಂದ ಆಚರಿಸಿದ್ದು,ಅವರ ಸಂಭ್ರಮ ನೋಡಿದರೆ ಜೂನ್ 4ರಂದು ಫಲಿತಾಂಶ ಬಂದ ನಂತರ ದೇಶದ ರಾಜಕಾರಣ ಬೇರೆಯೇ ಆಗಲಿದೆ ಎಂಬ ಸಂದೇಶ ನೀಡುತ್ತಿದೆ.