ನಟ ದರ್ಶನ್ ಗ್ಯಾಂಗ್ ನಿಂದ ಭೀಕರವಾಗಿ ಕೊಲೆಯಾಗಿ ಹೋಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಇಟ್ಟುಕೊಂಡಿದ್ದ ಬೋಗಸ್ ಹೆಸರು ಗೌತಮ್.
ದರ್ಶನ್ ಆಪ್ತ ಗೆಳತಿ ಪವಿತ್ರಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದು ಸಹ ಈ ಗೌತಮ್ ಎಂಬ ಫೇಕ್ ಅಕೌಂಟಿನಿಂದಲೇ. ಆದರೆ ಈ ಗೌತಮ್ ಅಶ್ಲೀಲ ಮೆಸೇಜ್ ಮಾಡಿರುವುದರಲ್ಲಿ ಪವಿತ್ರ ಗೌಡ ಮೊದಲೂ ಅಲ್ಲ ಕೊನೆಯವರೂ ಅಲ್ಲ.
ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ನಟಿಸುವ ನಟಿ ಒಬ್ಬರಿಗೆ ಗೌತಮ್ ಎಂಬ ಹೆಸರಿನಿಂದ ಸತತವಾಗಿ ಕೆಟ್ಟ ಮೆಸೇಜ್ ಗಳು ಬಂದ ಹಿನ್ನೆಲೆಯಲ್ಲಿ ದಿನಾಂಕ:25/03/2024 ರಂದು ಅವರು ಬೆಂಗಳೂರಿನ ಬಸವೇಶ್ವರನಗರ ಪೋಲಿಸ್ ಠಾಣೆಗೆ ಹೋಗಿ ದೂರು ಕೊಡುತ್ತಾರೆ. ಆದರೆ ಪೋಲಿಸರು ಕಿರುತೆರೆ ನಟಿಯ ದೂರನ್ನು ಗಂಭೀರವಾಗಿ ಪರಿಗಣಿಸದೇ ಹೋದ ಕಾರಣ, ಆಕೆ ಬೇಸರದಿಂದ ಬಂದು ತನ್ನ ದೂರದ ಸಂಬಂಧಿಯಾದ ಪೋಲಿಸರೊಬ್ಬರಿಗೆ ಕೆಟ್ಟ ಮೆಸೇಜ್ ಮಾಡುತ್ತಿದ್ದ ಗೌತಮ್ ಬಗ್ಗೆ ತಿಳಿಸುತ್ತಾಳೆ. ಆಗ ಅವರು ಉಪಾಯವಾಗಿ ಗೌತಮ್ ಎಂಬ ವ್ಯಕ್ತಿಯೇ ಚಿತ್ರದುರ್ಗದ ರೇಣುಕಾಸ್ವಾಮಿ ಎಂದು ಕಂಡು ಹಿಡಿದು ಅವನ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ಕೆಟ್ಟ ಮೇಸೆಜ್ ಗಳನ್ನು ಡಿಲಿಟ್ ಮಾಡಿಸಿದ್ದು ಎಂಬ ವಿಷಯ ಈಗ ತಿಳಿದು ಬರುತ್ತಿದೆ.
ಬಸವೇಶ್ವರ ನಗರ ಪೋಲಿಸರು ಅವತ್ತೇ ನಟಿಯ ದೂರನ್ನು ಆಧರಿಸಿ ರೇಣುಕಾಸ್ವಾಮಿ ಅಲಿಯಾಸ್ ಗೌತಮ್ ಎಂಬ ಆಸಾಮಿ ವಿರುದ್ದ ಎಫ್ಐಆರ್ ದಾಖಲಿಸಿ, ತನಿಖೆ ಮಾಡಿದ್ದರೆ ರೇಣುಕಾಸ್ವಾಮಿಯ ಜೀವವೂ ಉಳಿಯುತ್ತಿತ್ತು. ಜೊತೆಗೆ ಅವನ ಸೋಷಿಯಲ್ ಮೀಡಿಯಾ ಹುಚ್ಚು ಸಹ ಬಿಡುತ್ತಿತ್ತು. ಆದರೆ ಅಂದು ಬಸವೇಶ್ವರ ನಗರ ಪೋಲಿಸರ ಒಂದು ಸಣ್ಣ ನಿರ್ಲಕ್ಷ್ಯ ಇವತ್ತು ರೇಣುಕಾ ಸ್ವಾಮಿ ಅಲಿಯಾಸ್ ಗೌತಮ್ ಜೀವವೇ ಹೋಗುವಂತೆ ಮಾಡಿದೆ.