ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನಗಾನಹಳ್ಳಿ ಮಠದ ಬಳಿ ವಿ.ಸಿ. ನಾಲೆಯಲ್ಲಿ ಕೊಚ್ಚಿ ಹೋಗಿದ್ದ 4 ವರ್ಷದ ಮಗು ಸಬಿನ್ ರಾಜ್ ಶುಕ್ರವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ಧಾನೆ.
ನಿನ್ನೆ ಗುರುವಾರ ಮಧ್ಯಾಹ್ನ ನಾಲೆ ಪಕ್ಕದಲ್ಲೇ ಮಗು ಆಟವಾಗುತ್ತಿತ್ತು, ಆನಂತರ ನಾಪತ್ತೆಯಾಗಿರುವುದು ಬೆಳಕಿಗೆ ಬಂತು, ಕೆಲವರು ಮಗು ನಾಲೆಯಲ್ಲಿ ಕೊಚ್ಚಿಹೋಗಿದೆ ಎಂದು ತಿಳಿಸಿದ್ದರಿಂದ, ನಾಲೆಯಲ್ಲಿ ನೀರನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಿ, ಮಗುವಿಗಾಗಿ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದರು.
ಆದರೆ ಮಗು ನಾಪತ್ತೆಯಾಗಿದ್ದ ಸ್ವಲ್ಪ ದೂರುದಲ್ಲೇ ಮಗುವಿನ ಶವಪತ್ತೆಯಾಗಿದೆ. ಈ ಬಗ್ಗೆ ಮಂಡ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.