Wednesday, October 23, 2024

ಪ್ರಾಯೋಗಿಕ ಆವೃತ್ತಿ

ಭಾರತದ ನೆಲದಲ್ಲಿ ಚೀನಾ ಬಂಕರ್ ನಿರ್ಮಿಸಿದರೂ ಮೋದಿ ಮಾತನಾಡುತ್ತಿಲ್ಲ: ಬೆಚ್ಚಿಬೀಳಿಸುವ ಸಂಗತಿ ಬಿಚ್ಚಿಟ್ಟ ಸುಬ್ರಮಣ್ಯನ್ ಸ್ವಾಮಿ!

ಲಡಾಖ್‌ನಲ್ಲಿ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಉಪಗ್ರಹ ಚಿತ್ರಗಳು ಕೂಡ ಬಿಡುಗಡೆಯಾಗಿ 36 ದಿನಗಳು ಕಳೆದಿವೆ. ಆದರೆ, ಭಾರತದ ರಕ್ಷಣಾ ಸಚಿವರು ಮತ್ತು ಪ್ರಧಾನಿಯೂ ಸೇರಿದಂತೆ ಯಾವುದೇ ಅಧಿಕಾರಿಗಳಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಸರ್ಕಾರದ ಮೌನದ ಬಗ್ಗೆ ದೇಶದ ಜನರು ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಕೂಡ ವ್ಯಂಗ್ಯವಾಡಿದ್ದಾರೆ… ಆದರೂ ಮೋದಿ ಮಾತನಾಡುತ್ತಿಲ್ಲ!

ಪೂರ್ವ ಲಡಾಖ್‌ನ ಪ್ಯಾಂಗಾಂಗ್ ಸರೋವರದ ಸಮೀಪದಲ್ಲಿ ಚೀನಾ ನಿರ್ಮಾಣ ಕೆಲಸದಲ್ಲಿ ನಿರತವಾಗಿದೆ ಮತ್ತು ಭೂಮಿಯನ್ನು ಅಗೆಯುತ್ತಿದೆ ಎಂದು ಅಮೆರಿಕವು ಉಪಗ್ರಹಗಳಿಂದ ಸೆರೆಹಿಡಿದ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಚಿತ್ರಗಳು ಬಿಡುಗಡೆಯಾಗಿ ಬರೋಬ್ಬರಿ 36 ದಿನಗಳಾಗಿವೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪ್ರಧಾನಿ ಮೋದಿ ಅವರೂ ಮೌನವಾಗಿದ್ದಾರೆ. ಪ್ರಧಾನಿಯ ಮೌನವನ್ನು ಪ್ರಶ್ನಿಸಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ‘ಮೋದಿ ಕಡೆಯಿಂದ ಯಾವುದೇ ಕ್ರಮಗಳಿಲ್ಲ. ಅಂದರೆ…!’ ಎಂದು ಮೌನದ ಮರ್ಮವನ್ನು ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ಯನ್ನು ರದ್ದುಗೊಳಿಸಿದ ಬಳಿಕ ಲಡಾಕ್‌ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮೋದಿ ಸರ್ಕಾರ ಘೋಷಿಸಿದೆ. ಲಡಾಕ್ ಈಗ ಮೋದಿ ಸರ್ಕಾರದ ನೇರ ಆಳ್ವಿಕೆಯಲ್ಲಿದೆ. ಅಲ್ಲಿನ, ಪೂರ್ವ ಲಡಾನ್‌ನ ಪ್ಯಾಂಗಾಂಗ್ ಸರೋವರದ ಸುತ್ತಲಿನ ಪ್ರದೇಶದಲ್ಲಿ ಚೀನಾ ಸೇನೆ ದೀರ್ಘಾವಧಿಗಾಗಿ ಆಯುಧಗಳು ಮತ್ತು ಇಂಧನವನ್ನು ಸಂಗ್ರಹಿಸಲು ಭೂಗತ ಬಂಕರ್‌ಗಳನ್ನು ನಿರ್ಮಿಸಿದೆ. ಈ ಪ್ರದೇಶದ ಭಾರತದ ಪ್ರಮುಖ ಸೇನಾ ನೆಲೆಯಲ್ಲಿ ಶಸ್ತ್ರಸಜ್ಜಿತ ವಾಹನಗಳಿಗೆ ಗಟ್ಟಿಯಾದ ಆಶ್ರಯಗಳನ್ನು ಚೀನಾ ನಿರ್ಮಿಸಿಕೊಂಡಿದೆ ಎಂದು ಉಪಗ್ರಹ ಚಿತ್ರಗಳು ತೋರಿಸಿವೆ.

“>

 

ಬ್ಲ್ಯಾಕ್‌ಸ್ಕೈ ಒದಗಿಸಿದ ಚಿತ್ರಗಳ ಪ್ರಕಾರ, ಮೇ 30 ರಂದು ಸೆರೆಹಿಡಿಯಲಾದ ಒಂದು ಚಿತ್ರವು ದೊಡ್ಡ ಭೂಗತ ಬಂಕರ್‌ಗೆ ಎಂಟು ಇಳಿಜಾರಾದ ಪ್ರವೇಶದ್ವಾರಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇನ್ನೊಂದು ಸಣ್ಣ ಬಂಕರ್, ಐದು ಪ್ರವೇಶದ್ವಾರಗಳನ್ನು ಹೊಂದಿದೆ. 2021-22ರ ಅವಧಿಯಲ್ಲಿಯೇ ಭೂಗತ ಬಂಕರ್‌ಗಳನ್ನು ಚೀನಾ ನಿರ್ಮಿಸಿದೆ. ಅಲ್ಲಿ, ಆಯುಧ ವ್ಯವಸ್ಥೆಗಳು, ಇಂಧನ ಅಥವಾ ಇತರ ವಸ್ತುಗಳನ್ನು ಸಂಗ್ರಹಿಸಲು ಬಳಸಬಹುದಾಗಿದೆ.

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನೆಲೆಯು ಪಾಂಗಾಂಗ್ ಸರೋವರದ ಉತ್ತರ ತೀರದ ಪರ್ವತಗಳ ನಡುವೆ ನೆಲೆ ಮಾಡಿಕೊಂಡಿದೆ. ಈ ಪ್ರದೇಶವನ್ನು ಭಾರತವು ತನ್ನ ಭಾಗವೆಂದು ಹೇಳಿಕೊಂಡಿದೆ. ಈ ಪ್ರದೇಶವು ಚೀನಾ-ಭಾರತ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ(LAC)ಯಿಂದ ಭಾರತದೊಳಗೆ 5 ಕಿ.ಮೀ ಅಂತರದಲ್ಲಿದೆ. ಅಂದರೆ, ಚೀನಾ 5 ಕಿ.ಮೀನಷ್ಟು ಭಾರತವನ್ನು ಆಕ್ರಮಿಸಿಕೊಂಡಿದೆ.

ಗಮನಾರ್ಹವಾಗಿ ಈ ಪ್ರವೇಶವು 2020ರ ಜೂನ್‌ನಲ್ಲಿ ಭಾರತೀಯ ಸೈನಿಕರು ಮತ್ತು ಚೀನಾ ಪಡೆಯ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದ ಸ್ಥಳವಾಗಿದೆ. ಈ ಸ್ಥಳವನ್ನು ರಕ್ಷಿಸಲು ಅಂದು ಭಾರತೀಯ ಯೋಧರು ಘರ್ಷಣೆ ನಡೆಸಿದ್ದರು. ಆದರೆ, ಈಗ ಅಲ್ಲಿ ಚೀನಾ ಬಂಕರ್‌ಗಳನ್ನೇ ನಿರ್ಮಿಸಿಕೊಂಡಿದೆ. 2020ರಲ್ಲಿ ಬಿಕ್ಕಟ್ಟು ಪ್ರಾರಂಭವಾದ ಬಳಿಕ ಭಾರತವು ಚೀನಾ ಗಡಿಯುದ್ದಕ್ಕೂ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಂಡಿದೆ.

ಆದಾಗ್ಯೂ, ಈ ವರ್ಷದ ಆರಂಭದಲ್ಲಿ ಹೊರಬಂದ ಉಪಗ್ರಹ ಚಿತ್ರಗಳು ಭಾರತದ ಗಡಿಯಲ್ಲಿ ಚೀನಾ ಸುಧಾರಿತ ಯುದ್ಧ ವಿಮಾನಗಳನ್ನು ನಿಯೋಜಿಸಿರುವುದನ್ನು ತೋರಿಸಿವೆ. ಚೀನಾದ ಅತ್ಯಂತ ಸುಧಾರಿತ ಸ್ಟೆಲ್ತ್ ಯುದ್ಧ ಜೆಟ್ಅನ್ನು ನಿಯೋಜಿಸಿದೆ. ಅಲ್ಲದೆ, ಮೇ 30ರಂದು ಬಿಡುಗಡೆಯಾದ ಚಿತ್ರವು, ಎಂಟು ಚೆಂಗ್ಡು ಜೆ-10 ಮಲ್ಟಿ-ರೂಲ್ ಜೆಟ್‌ ಮತ್ತು ಆರು ಜೆ -20 ಜೆಟ್‌ಗಳನ್ನು ನಿಯೋಜಿಸಲಾಗಿರುವುದನ್ನು ತೋರಿಸಿದೆ.

ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿರುವ ಬಗ್ಗೆ ಉಪಗ್ರಹ ಚಿತ್ರಗಳು ಕೂಡ ಬಿಡುಗಡೆಯಾಗಿ 36 ದಿನಗಳು ಕಳೆದಿವೆ. ಆದರೆ, ಭಾರತದ ರಕ್ಷಣಾ ಸಚಿವರು ಮತ್ತು ಪ್ರಧಾನಿಯೂ ಸೇರಿದಂತೆ ಯಾವುದೇ ಅಧಿಕಾರಿಗಳಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ. ಕೇಂದ್ರ ಸರ್ಕಾರದ ಮೌನದ ಬಗ್ಗೆ ದೇಶದ ಜನರು ಪ್ರಶ್ನಿಸುತ್ತಿದ್ದಾರೆ. ಸದಾ ಸರ್ಕಾರದ ನಿರ್ಲಕ್ಷ್ಯ  ಧೋರಣೆಗಳನ್ನು ಟೀಕಿಸುವ, ವ್ಯಂಗ್ಯ ಮಾಡುವ ಬಿಜೆಪಿ ನಾಯಕ, ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು, ‘ಇಷ್ಟೆಲ್ಲಾ ನಡೆಯುತ್ತಿದ್ದರು ಮೋದಿ ಕಡೆಯಿಂದ ಯಾವುದೇ ನಡೆ ಇಲ್ಲ (ಕ್ರಮ)… ಅಂದರೆ…..!’ ಎಂದು ಮೋದಿ ಅವರ ಉದ್ದೇಶವೇನೆಂಬುದನ್ನು ಪ್ರಶ್ನಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಹಲವಾರು ನೆಟ್ಟಿಗರು, ”ಭಾರತದಲ್ಲಿ ಹೂಡಿಕೆ ಮಾಡಲು ಚೀನಾಗೆ ಮೋದಿ ರೆಡ್‌ ಕಾರ್ಪೆಟ್‌ ಹಾಸುತ್ತಿದ್ದಾರೆ. ಚೀನಾಕ್ಕೆ ಕೆಂಗಣ್ಣ ತೋರಿಸಲು ಅವರಿಗೆ ಸಾಧ್ಯವಿಲ್ಲ. ಅಷ್ಟು ಧೈರ್ಯವೂ ಇಲ್ಲ. ಕೆಲವು ಮೊಬೈಲ್ ಆಪ್‌ಗಳನ್ನು ನಿಷೇಧಿಸುವ ಮೂಲಕ ಜನರನ್ನು ಮೂರ್ಖರನ್ನಾಗಿಸುವುದನ್ನು ಮಾತ್ರ ಅವರು ಮಾಡಬಲ್ಲರು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಭಾರತದ ಕೆಂಗಣ್ಣು ಈಗ ಚೀನಾದ ಎಲ್ಲ ಚಟುವಟಿಕೆಗಳನ್ನು ಬೆಂಬಲಿಸುವಂತೆ ಕಾಣುತ್ತಿದೆ” ಎಂದು ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!