Wednesday, September 25, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ಬನ್ನಿಮಂಟಪದ ಆವರಣದಲ್ಲಿ ಸ್ವಚ್ಚತಾ ಕಾರ್ಯ

ಶೇಷಾದ್ರಿಪುರಂ ಪದವಿ ಕಾಲೇಜಿನ ಎನ್ಎಸ್ಎಸ್ ಘಟಕ, ಅಚೀವರ್ಸ್ ಅಕಾಡೆಮಿ ಹಾಗೂ ಕಿರಗೂರು ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಶ್ರೀರಂಗಪಟ್ಟಣ ಸಮೀಪದ ಕಿರಂಗೂರು ವೃತ್ತದ ಪಕ್ಕದಲ್ಲಿರುವ ಐತಿಹಾಸಿಕ ಬನ್ನಿಮಂಟಪದ ಆವರಣವನ್ನು ಸ್ವಚ್ಛ ಮಾಡುವ ಕಾರ್ಯವನ್ನು ಮಾಡಲಾಯಿತು.

ಬನ್ನಿ ಮಂಟಪದ ಸುತ್ತ ಬೆಳೆದು ನಿಂತಿದ್ದ ಗಿಡ ಗಂಟೆಗಳನ್ನು ಹಾಗೂ ಪ್ಲಾಸ್ಟಿಕ್ ಪೇಪರ್ ಮುಂತಾದ ಕಸಗಳನ್ನು ಶ್ರಮದಾನದ ಮಾಡುವ ಮುಖಾಂತರ ತೆರವು ಮಾಡಲಾಯಿತು, ಹಾಗೆಯೇ ಬನ್ನಿ ಮಂಟಪದ ಸುತ್ತ ಗಿಡಗಳನ್ನ ನೆಡಲಾಯಿತು

ಈ ಸಂದರ್ಭದಲ್ಲಿ ಕಿರಂಗೂರು ಗ್ರಾಮ ಪಂಚಾಯಿತಿಯ ಪಿಡಿಒ ಪ್ರಶಾಂತ್ ಬಾಬು,‌ ಎನ್ಎಸ್ಎಸ್ ಅಧಿಕಾರಿ ಡಾ. ರಾಘವೇಂದ್ರ, ಗ್ರಾಮದ ಮುಖಂಡರಾದ ಯಶವಂತ್ , ಸಮರ್ಪಣ ಟ್ರಸ್ಟ್ ನ ಅಧ್ಯಕ್ಷರಾದ ಜೈ ಶಂಕರ್, ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಗುರುಮೂರ್ತಿ ಭಟ್, ಎನ್ಎಸ್ಎಸ್ ಸಹ ಕಾರ್ಯಕ್ರಮ ಅಧಿಕಾರಿ ಮುರಳಿ, ವಿದ್ಯಾರ್ಥಿಗಳಾದ ಅಚಲ, ಅಮಿತ್, ವಿದ್ಯಾ, ದರ್ಶನ್, ದಿವಿತ್, ಮುರಳಿ ಹಾಗೂ ಇನ್ನು ಮುಂತಾದವರು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!