Friday, September 20, 2024

ಪ್ರಾಯೋಗಿಕ ಆವೃತ್ತಿ

ಜಗನ್ನಾಥ್ ಶೆಟ್ಟಿ ಖೆಡ್ಡಾಗೆ ಕೆಡವಲು ಮೊದಲೇ ಸಂಚು !?


  • ಹನಿಟ್ರ್ಯಾಪ್ ಮಾಡಿ 50 ಲಕ್ಷ ವಸೂಲಿ ಮಾಡಿದರು ಎಂದು ಮಂಡ್ಯ ಪೋಲಿಸರಿಗೆ ದೂರು

  • ಪೋಲಿಸರಿಂದ ತಲೆತಪ್ಪಿಸಿಕೊಂಡಿರುವ ಯುವತಿಯನ್ನು ಶೀಘ್ರ ಬಂಧಿಸಿ

ಹನಿಟ್ರ್ಯಾಪ್ ಪ್ರಕರಣದಲ್ಲಿ ಶ್ರೀನಿಧಿ ಗೋಲ್ಡ್ ಮಾಲೀಕ ಜಗನ್ನಾಥ ಶೆಟ್ಟಿಯನ್ನು ಖೆಡ್ಡಾಕ್ಕೆ ಕೆಡವಲು ಮೊದಲೇ ಸಂಚು ಹೆಣೆದಿತ್ತು ಸಲ್ಮಾಭಾನು ಮತ್ತು ಗ್ಯಾಂಗ್ ಎನ್ನಲಾಗುತ್ತಿದೆ.

ಈ ಗ್ಯಾಂಗಿನಲ್ಲಿರುವ 5-6 ಸದಸ್ಯರು ಪ್ರತಿಷ್ಟಿತ ವ್ಯಕ್ತಿಗಳ ಮಾಹಿತಿ‌ ಕಲೆ ಹಾಕಿ‌ ಯಾರಿಗೆ ಹೆಣ್ಣು ಮಕ್ಕಳ ವೀಕ್ ನೆಸ್ ಇರುತ್ತೋ ಅಂತವರ ಹಿಂದೆ ಬಿದ್ದು ಅವರನ್ನು ಮೊದಲು ತನ್ನ ಬಲೆಗೆ ಕೆಡವುತ್ತಿತ್ತು.ಸಲ್ಮಾಬಾನು ಗ್ಯಾಂಗ್ ಹೀಗೆ ಇನ್ನೂ ಹಲವರನ್ನು ತನ್ನ ಬಲೆಗೆ ಕೆಡವಿಕೊಂಡು ಹಣ ವಸೂಲಿ ಮಾಡಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಆದರೆ ಕೆಲವರು ಮರ್ಯಾದೆ ಹೋಗುತ್ತದೆ ಎಂದು ಅಂಜಿ ದೂರು ನೀಡದೆ ಸುಮ್ಮನಿದ್ದಾರೆ.

ಮಂಡ್ಯ ಪೊಲೀಸರು ಕೂಡ ಇದೊಂದು ಪ್ರಕರಣ ಹಿನ್ನೆಲೆಯಲ್ಲಿ ತನಿಖೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.ಅಲ್ಲಿಗೆ ಎಲ್ಲೆಲ್ಲಿ ಹನಿಟ್ರ್ಯಾಪ್ ನಡೆದಿತ್ತೋ ಅನ್ನುವುದು ಹಾಗೆಯೇ ಮುಚ್ಚಿಹೋಗಲಿದೆ.

ಖೆಡ್ಡಾಗೆ ಬಿದ್ದ ಶೆಟ್ಟಿ

ಜಗನ್ನಾಥ ಶೆಟ್ಟಿ ವೀಕ್ನೆಸ್ ತಿಳಿದಿದ್ದ ಸಲ್ಮಾಬಾನು ಗ್ಯಾಂಗ್ ಆತನನ್ನು ಖೆಡ್ಡಾಗೆ ಕೆಡವಿ ಹಣ ವಸೂಲಿ ಮಾಡಲು ಸಿದ್ಧವಾಗಿ ಪಕ್ಕಾ ಪ್ಲಾನ್ ಹಾಕಿದ್ದರು. ಅದರಂತೆ ಯುವತಿಯೊಬ್ಬಳನ್ನು ಮುಂದೆ ಬಿಟ್ಟು ಜಗನ್ನಾಥ್ ಶೆಟ್ಟಿಯ ಸಂಪರ್ಕ ಸಾಧಿಸುವ ಮಾಡಲಾಯಿತು. ಯುವತಿ ಅದು ಇದು ಮಾತನಾಡುತ್ತಾ ಆತನನೊಂದಿಗೆ ಕ್ಲೋಸ್ ಆಗಿ ಹರಟೆ ಹೊಡೆಯುತ್ತಿದ್ದಳು. ಶೆಟ್ಟಿ ಕೂಡ ನಾನು ಲೆಕ್ಚರರ್ ಎಂದು ಯುವತಿಗೆ ಹೇಳಿ ಬಾ ಪಾಠ ಮಾಡ್ತೇನೆ ಎಂದೆಲ್ಲಾ ಸಲಿಗೆಯಿಂದ ಮಾತನಾಡಿ ಆಕೆಯ ಬಲೆಗೆ ಬಿದ್ದ. ಕೊನೆಗೆ ಆತನೇ ಮೈಸೂರಿನ ದರ್ಶನ್ ಲಾಡ್ಜ್ ಬುಕ್ ಮಾಡಿ ಆಕೆಯನ್ನು ಅಲ್ಲಿಗೆ ಕರೆದಿದ್ದ.

ನಾಲ್ಕು ಬಾರಿಸಿದ್ರು
ಜಗನ್ನಾಥ ಶೆಟ್ಟಿ ನನ್ನನ್ನು ಚಿನ್ನ ಪರೀಕ್ಷಿಸಿ ಬನ್ನಿ ಎಂದು ಲಾಡ್ಜ್ ಗೆ ಕರೆದುಕೊಂಡು ಹೋಗಿ ಯುವತಿಯ ಕರೆತಂದು ಹನಿಟ್ರ್ಯಾಪ್ ಮಾಡಿ 50 ಲಕ್ಷ ವಸೂಲಿ ಮಾಡಿದರು ಎಂದು ಮಂಡ್ಯ ಪೋಲಿಸರಿಗೆ ದೂರು ನೀಡಿದ್ದ. ಆದರೆ ವೈರಲ್ ಆಗಿರುವ ಆಡಿಯೋ,ವೀಡಿಯೋಗಳು ಜಗನ್ನಾಥ ಶೆಟ್ಟಿಯ ಚಪಲ ಮುಖವನ್ನು ಅನಾವರಣಗೊಳಿಸಿದೆ. ಪೋಲಿಸರಿಗೆ ಇನ್ನೂ ಸಿಕ್ಕದ ಯುವತಿಯೇ ಜಗನ್ನಾಥ ಶೆಟ್ಟಿಯ ಚಪಲ ಪುರಾಣವನ್ನು ಅನಾವರಣ ಮಾಡಿ ಕಿಡ್ನ್ಯಾಪ್,ಹನಿಟ್ರ್ಯಾಪ್ ಎಲ್ಲಾ ಮಣ್ಣಂಗಟ್ಟಿ ಎಂದು ವೈರಲ್ ಮಾಡಿದ್ದಾಳೆ ಎನ್ನಲಾಗುತ್ತಿದೆ.

ಫೆಬ್ರವರಿ 26, 2022 ರಂದು ಮೈಸೂರಿನಲ್ಲಿ ಉಳಿಯೋಣ. ನಾನು ನಿನಗೆ ಪಾಠ ಮಾಡುತ್ತೇನೆ ಎಂದೆಲ್ಲ ಮಾತನಾಡಿದ ಆಡಿಯೋಗಳು, ದರ್ಶನ್ ಲಾಡ್ಜ್ ನಲ್ಲಿ ಶೆಟ್ಟಿಗೆ ಬಿದ್ದ ಏಟುಗಳು ಬೇರೆಯೇ ಕಥೆ ಹೇಳಿವೆ.ಆ ಯುವತಿ ಮಾಡಿದ ಡ್ರಾಮಾ ನೋಡಿದ್ರೆ ಈಕೆ ಎಂತಹ ದೊಡ್ಡ ನಟಿ ಎಂಬುದು ಗೊತ್ತಾಗುತ್ತದೆ.

ಜಗನ್ನಾಥ ಶೆಟ್ಟಿ, ಮೇಲೆ ಹಲ್ಲೆ ಮಾಡಲು ತನ್ನದೇ ಗ್ಯಾಂಗಿನ ಇಬ್ಬರು ಸದಸ್ಯರು ಮುಂದಾದಾಗ ಚಿಕ್ಕಪ್ಪ ಹೊಡಿಬೇಡಿ,ಅವರದ್ದು ತಪ್ಪಿಲ್ಲ,ನಾನೇ ಇಲ್ಲಿಗೆ ಬಂದಿರುವುದು, ಅವರು ಲೆಕ್ಚರರ್ ನಾನು ಪಾಠ ಕಲಿಯಲು ಬಂದೆ ಎಂದು ಹೇಳುತ್ತಾಳೆ.ಜಗನ್ನಾಥ ಶೆಟ್ಟಿಗೆ ನಾವಿಬ್ಬರೂ ಆಕಸ್ಮಿಕವಾಗಿ ತಗಲಾಕಿ ಕೊಂಡಿದ್ದೇವೆ ಎಂದು ನಂಬಿಸಲು ಹೋಗಿತ್ತಾಳೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಆ ಯುವತಿ ಅವರದೇ ಗ್ಯಾಂಗಿನ ಸದಸ್ಯೆ ಎಂಬುದು ಗೊತ್ತಾಗುತ್ತದೆ. ಇವರೆಲ್ಲರೂ ಸೇರಿ ದೊಡ್ಡ ನಾಟಕವನ್ನು ಮಾಡಿದ್ದಾರೆ ಎಂಬುದು ತಿಳಿಯುತ್ತದೆ.

ಇದನ್ನೂ ಓದಿ : ಹನಿಟ್ರ್ಯಾಪ್: ಮಂಡ್ಯದ ಚಿನ್ನದ ವ್ಯಾಪಾರಿಯಿಂದ 50 ಲಕ್ಷ ದೋಚಿದ್ರು

ಕೆಲವು ಪ್ರಗತಿಪರ ಸಂಘಟನೆಗಳು ಜಗನ್ನಾಥ ಶೆಟ್ಟಿ ಯುವತಿಯರನ್ನು ಕಾಮುಕ ದೃಷ್ಟಿಯಿಂದ ನೋಡುತ್ತಾನೆ. ಹೆಣ್ಣನ್ನು ಭೋಗದ ವಸ್ತು ಎಂದು ತಿಳಿದಿದ್ದಾನೆ ಎಂದೆಲ್ಲಾ ಆರೋಪಿಸಿ ಪ್ರತಿಭಟನೆ ಮಾಡಿ ಆತನ ಬಂಧಿಸಿ ತನಿಖೆ ಮಾಡಲು ಒತ್ತಾಯಿಸಿದೆ.ಅದೇ ರೀತಿ ಈ ಪ್ರಕರಣದಲ್ಲಿ ಭಾಗಿಯಾದ ಯುವತಿ ಕೂಡಾ ಸಾಚಾ ಅಲ್ಲ ಅವಳನ್ನು ಮುಂದಿಟ್ಟುಕೊಂಡು ಈ ಗ್ಯಾಂಗ್ ಹನಿಟ್ರ್ಯಾಪ್ ದಂಧೆ ನಡೆಸಿದೆ ಎಂಬ ಸತ್ಯವನ್ನು ಪೋಲೀಸರು ಜನರ‌ ಎದುರು ಬಯಲು ಮಾಡಬೇಕಿದೆ.

ವ್ಯವಸ್ಥಿತ ದಂಧೆ
ಆದರೆ ಈ ಪ್ರಕರಣದಲ್ಲಿ ಇಬ್ಬರು ಯುವತಿಯರು ಹಾಗೂ ನಾಲ್ಕು ಮಂದಿ ಯುವಕರು ಭಾಗಿಯಾಗಿರುವುದನ್ನು ನೋಡಿದರೆ ಇವರದ್ದು ವ್ಯವಸ್ಥಿತ ಗ್ಯಾಂಗ್ ಆಗಿದ್ದು, ಜಿಲ್ಲೆಯಲ್ಲಿ ಹನಿಟ್ರ್ಯಾಪ್ ದಂಧೆ ನಡೆಸುತ್ತಿದೆ ಎಂಬುದು ಗೊತ್ತಾಗುತ್ತದೆ.

ಚಿಕ್ಕಪ್ಪ, ಚಿಕ್ಕಪ್ಪ ಎಂದು ಅಮಾಯಕಳಂತೆ ನಾಟಕ ಮಾಡುತ್ತಾ ಜಗನ್ನಾಥ ಶೆಟ್ಟಿಯನ್ನು ಬೆದರಿಸಿ 50 ಲಕ್ಷ ಸುಲಿಗೆ ಮಾಡಿರುವ ಈ ತಂಡದ ಸದಸ್ಯರು ಯಾರು? ಇನ್ನೂ ಎಷ್ಟು ಮಂದಿಯನ್ನ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದಾರೆ ಎಂಬ ಮಾಹಿತಿ ಹೊರತರಬೇಕಿದೆ.

ಈಗಾಗಲೇ ಇದೇ ಗ್ಯಾಂಗ್ ಸಮಾಜದಲ್ಲಿರುವ ಇನ್ನು ಹಲವು ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ಆದರೆ ಯಾವುದೇ ಅಧಿಕೃತ ದೂರು ದಾಖಲಾಗದಿರುವ ಕಾರಣ ಜಗನ್ನಾಥ ಶೆಟ್ಟಿ ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ. ಮಂಡ್ಯ ಪೋಲಿಸರಿಂದ ತಲೆತಪ್ಪಿಸಿಕೊಂಡಿರುವ ಯುವತಿಯನ್ನು ಶೀಘ್ರ ಬಂಧಿಸಿ ಸಲ್ಮಾಭಾನು ಮತ್ತು ಈ ಗುಂಪಿನ ಸದಸ್ಯರು ಮಾಡಿರುವ ಎಲ್ಲಾ ಪ್ರಕರಣಗಳನ್ನು ಬಯಲಿಗೆ ತರಬೇಕಿದೆ.

ಹಾಗೆಯೇ ಜಗನ್ನಾಥ ಶೆಟ್ಟಿಯನ್ನು ಬಂಧಿಸಿ ಈ ಪ್ರಕರಣದ ನಿಜವಾದ ಸತ್ಯವನ್ನು ಬಾಯಿ ಬಿಡಿಸಬೇಕಿದೆ.

ಇದನ್ನೂ ಓದಿ : ಜಗನ್ನಾಥ ಶೆಟ್ಟಿ ಮಾತನಾಡಿರುವ ವೈರಲ್ ಆಡಿಯೋ!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!