Thursday, September 19, 2024

ಪ್ರಾಯೋಗಿಕ ಆವೃತ್ತಿ

ಐದು ಮಂದಿ ಕೊಲೆ ಆರೋಪಿಗಳ ಬಂಧನ

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಲೈ 2 ರಂದು ಕೊಲೆಯಾಗಿದ್ದ ಸುಂದರ ರಾಜ್ ಅಲಿಯಾಸ್ ದೀಪಕ್ ಎಂಬಾತನ ಪ್ರಕರಣದಲ್ಲಿ ಭಾಗಿಯಾಗಿದ್ದ 5 ಮಂದಿ ಆರೋಪಿಗಳನ್ನು ಕೆ.ಆರ್.ಸಾಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಳೆದ ಜುಲೈ 2 ರಂದು ಕೆ.ಆರ್.ಸಾಗರ ನಿವಾಸಿ ಚಾಲಕ ಸುಂದರ್ ರಾಜ್ ಅಲಿಯಾಸ್ ದೀಪಕ್ ಎಂಬಾತನನ್ನು ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಮದ ಬಳಿ ಇರುವ ವರುಣ ನಾಲೆಯ ಬಳಿ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಆತನ ಪತ್ನಿ ಕೆ.ಆರ್. ಸಾಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಸ್ಪಿ,ಎಎಸ್ಪಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಕೆ.ಆರ್. ಸಾಗರ ಠಾಣೆಯ ಸಿಪಿಐ ಡಿ.ಯೋಗೇಶ್ ಅವರ ತಂಡವನ್ನು ದುಷ್ಕರ್ಮಿಗಳ ಪತ್ತೆಗೆ ನೇಮಿಸಲಾಗಿತ್ತು.

ಅದರಂತೆ ಇಂದು ಸುಂದರ್ ರಾಜ್ ಕೊಲೆ ಮಾಡಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಸುಂದರರಾಜ್ ಪತ್ನಿಯೇ ಈ ಕೊಲೆಯ ಪ್ರಮುಖ ಪಾತ್ರಧಾರಿ.ಅಲ್ಲದೆ ಸುಂದರ ರಾಜನ ನಾಲ್ಕು ಮಂದಿ ಸ್ನೇಹಿತರು ಆಕೆಯ ಪತ್ನಿ ಜೊತೆ ಸೇರಿ ಈ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಕೊಲೆಯಾದ ಸುಂದರ್ ರಾಜ್ ಚಾಲಕನಾಗಿದ್ದು ಕೆಲಸಕ್ಕೆಂದು ಹೋದರೆ 15 ದಿನ ಅಥವಾ ತಿಂಗಳಿಗೊಮ್ಮೆ ಬರುತ್ತಿದ್ದ.ಬರುವಾಗ ಕಂಠಪೂರ್ತಿ ಕುಡಿದುಕೊಂಡು ಬಂದು ಹೆಂಡತಿಗೆ ಹೊಡೆದು- ಬಡಿದು ಮಾನಸಿಕ ಹಿಂಸೆ ಕೊಡುತ್ತಿದ್ದ. ಈ ಬಗ್ಗೆ ಬೇಸತ್ತಿದ್ದ ಸುಂದರ ರಾಜನ ಪತ್ನಿ ನನ್ನ ಗಂಡನ ನಾಲ್ವರು ಸ್ನೇಹಿತರೊಂದಿಗೆ ಸೇರಿ ಕಿರುಕುಳ ಕೊಡುತ್ತಿದ್ದ ಗಂಡ ಸುಂದರರಾಜನನ್ನು ಕೊಲೆ ಮಾಡಿಸಿದ್ದಾಳೆ.

ಇಂದು ಸುಂದರ ರಾಜನ ಹೆಂಡತಿ ಹಾಗೂ ಕೊಲೆಗೆ ಸಹಕರಿಸಿದ ನಾಲ್ಕು ಮಂದಿಯನ್ನು ಸೇರಿ ಒಟ್ಟು ಐವರನ್ನು ಸಿಪಿಐ ಡಿ. ಯೋಗೇಶ್ ಬಂಧಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!