Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯವರನ್ನು ನಂಬಲು ಬರುವುದಿಲ್ಲ ಬರವಣಿಗೆಯಲ್ಲಿ ಪಡೆಯಿರಿ : ಅದಿತ್ಯ ಠಾಕ್ರೆ

ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರು ಕೇಂದ್ರದಲ್ಲಿ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿರುವ ಬಿಜೆಪಿ ಮಿತ್ರಪಕ್ಷಗಳಿಗೆ ತಮ್ಮ ಸಲಹೆಯನ್ನು  ಶುಕ್ರವಾರ ಎಕ್ಸ್ (ಹಿಂದಿನ ಟ್ವಿಟರ್) ಗೆ  ಹಂಚಿಕೊಂಡಿದ್ದಾರೆ

ಪೋಸ್ಟ್‌ನಲ್ಲಿ, “ಹೊಸದಾಗಿ ಎನ್‌ಡಿಎಯಲ್ಲಿ ಬಿಜೆಪಿಯ ಸಂಭಾವ್ಯ ಮಿತ್ರಪಕ್ಷಗಳಿಗೆ ಒಂದು ವಿನಮ್ರ ಸಲಹೆ: ಸ್ಪೀಕರ್ ಹುದ್ದೆಯನ್ನು ಪಡೆಯಿರಿ” ಎಂದು ಬರೆದಿದ್ದಾರೆ.

“ಬಿಜೆಪಿಯ ತಂತ್ರಗಳನ್ನು ಅನುಭವಿಸಿದ ಅವರು, ಅವರು ನಿಮ್ಮೊಂದಿಗೆ ಸರ್ಕಾರ ರಚಿಸುವ ನಿಮಿಷದಲ್ಲಿ, ಅವರು ಭರವಸೆಗಳನ್ನು ಮುರಿಯುತ್ತಾರೆ ಮತ್ತು ನಿಮ್ಮ ಪಕ್ಷಗಳನ್ನು ಮುರಿಯಲು ಪ್ರಯತ್ನಿಸುತ್ತಾರೆ. ನೀವು ಅದನ್ನು ಮೊದಲೇ ಅನುಭವಿಸಿದ್ದೀರಿ” ಎಂದು ಅವರು ಪೋಸ್ಟ್‌ನಲ್ಲಿ ಟಿಡಿಪಿಯನ್ನು ಟ್ಯಾಗ್ ಮಾಡಿದ್ದಾರೆ.

ಬಿಜೆಪಿಯನ್ನು ‌ನಂಬಲು ಸಾಧ್ಯವಿಲ್ಲ ಕೊಠಡಿಯಲ್ಲಿ ಭರವಸೆಗಳನ್ನು ನೀಡಿ ಸಾರ್ವಜನಿಕವಾಗಿ ನಿರಾಕರಿಸಿಬಿಡುತ್ತಾರೆ ಹಾಗಾಗಿ ಎನ್ಡಿಎ ಮಿತ್ರರು ಎಲ್ಲಾ ಭರವಸೆಗಳನ್ನು ಬರವಣೆಗೆಯಲ್ಲಿ ಪಡೆಯಿರಿ ಎಂದು ಅದಿತ್ಯ ಠಾಕ್ರೆ ಆಗ್ರಹಿಸಿದ್ದಾರೆ.

ನನ್ನ ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ ಕೊಠಡಿ ಒಳಗೆ ನಮಗೆ ಭರವಸೆ ನೀಡಿ ಸಾರ್ವಜನಿಕವಾಗಿ ನಿರಾಕರಿಸಿಬಿಟ್ಟರು. ಹಾಗಾಗಿ ಎನ್ಡಿಎ ಮಿತ್ರರು ಎಚ್ಚರಿಕೆಯಿಂದ ಇರುವಂತೆ ಅದಿತ್ಯ ಠಾಕ್ರೆ ಆಗ್ರಹಿಸಿದ್ದಾರೆ.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!